ರಾಯಚೂರು: ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ ಮತ್ತು ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರು 393ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 419ನೇ ವರ್ಧಂತಿ ಉತ್ಸವ ಕಾರ್ಯಕ್ರಮವನ್ನೊಳಗೊಂಡ ‘ಶ್ರೀ ರಾಘವೇಂದ್ರ ಗುರುಭಕ್ತಿ ಉತ್ಸವ’ಕ್ಕೆ ಚಾಲನೆ ಸೋಮವಾರ ಚಾಲನೆ ನೀಡಿದರು.
ಬೆಳಿಗ್ಗೆ ರಾಘವೇಂದ್ರಸ್ವಾಮಿಗಳ ಮೂಲಬೃಂದಾವನಕ್ಕೆ ಅಭಿಷೇಕ ನಡೆಯಿತು. ಅನಂತರ ರಾಯರ ಮೂಲ ಪಾದುಕೆಗಳಿಗೆ ಪೀಠಾಧಿಪತಿ ಮತ್ತು ಉತ್ತರಾಧಿಕಾರಿಗಳಿಬ್ಬರು ಪುಷ್ಪ, ಕನಕ, ಮುತ್ತು, ರತ್ನಗಳಿಂದ ಅಭಿಷೇಕ ಮಾಡಿದರು.
ನವರತ್ನ ಖಚಿತ ಚಿನ್ನದ ರಥೋತ್ಸವ ನಡೆಯಿತು. ಚಿನ್ನದ ಪಲ್ಲಕ್ಕಿಯಲ್ಲಿ ರಾಘವೇಂದ್ರಸ್ವಾಮಿಗಳ ಮೂಲ ಪಾದುಕೆಗಳನ್ನಿಟ್ಟು ಉತ್ಸವ ಮಾಡಲಾಯಿತು. ಸಾವಿರಾರು ಭಕ್ತರು ಪಟ್ಟಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗುರುಭಕ್ತಿ ಉತ್ಸವವು ಮಾ.8ರವರೆಗೆ ಮುಂದುವರಿಯಲಿದೆ.
ಪೀಠಾಧಿಪತಿ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ಆಡಳಿತಾಧಿಕಾರಿ ಆರ್. ಪ್ರಭಾಕರರಾವ್, ರಾಜಾ ಎಸ್. ಗಿರಿರಾಜಾಚಾರ್ಯ, ವಿದ್ವಾಂಸರಾದ ವಿ.ಆರ್ ಪಂಚಮುಖಿ, ಎನ್. ವಾದಿರಾಜಾಚಾರ್ಯ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.