ADVERTISEMENT

ಜಿಲ್ಲೆಯಲ್ಲಿ ಶೇ 67.19 ಮತದಾನ ದಾಖಲು

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: 27 ಮತಗಟ್ಟೆಗಳಲ್ಲಿ ಮತದಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:01 IST
Last Updated 9 ಜೂನ್ 2018, 9:01 IST

ರಾಯಚೂರು: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ಜಿಲ್ಲೆಯಾದ್ಯಂತ 27 ಮತಗಟ್ಟೆಗಳಲ್ಲಿ ಮತದಾನವು ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ 67.19 ಮತದಾನವಾಗಿದೆ.

ಜಿಲ್ಲೆಯಲ್ಲಿ ಒಟ್ಟು 12,007 ಮತದಾರರಿದ್ದು, ಇದರಲ್ಲಿ 8,903 ಪುರುಷ ಹಾಗೂ 3,103 ಮಹಿಳಾ ಮತದಾರರಿದ್ದಾರೆ. ಈ ಪೈಕಿ 8,067 ಮತಗಳು ಚಲಾವಣೆಯಾಗಿವೆ. ಪ್ರತಿ ಮತಗಟ್ಟೆಯಲ್ಲೂ ವಿಡಿಯೊ ಚಿತ್ರೀಕರಣ ಮಾಡಲು ಕ್ರಮ ಕೈಗೊಳ್ಳಲಾಗಿತ್ತು.

ರಾಯಚೂರಿನಲ್ಲಿ ಬಾಲಕಿಯರ ಜ್ಯೂನಿಯರ್ ಕಾಲೇಜು, ಬಾಲಕರ ಸರ್ಕಾರಿ ಪದವಿ ಕಾಲೇಜು, ತಹಶೀಲ್ದಾರ್‌ ಕಚೇರಿ, ಕರ್ನಾಟಕ ಸಂಘ, ಎಪಿಎಂಸಿ ಕಚೇರಿ, ಶಕ್ತಿನಗರ ಮನರಂಜನಾ ಕೇಂದ್ರ, ಯರಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 

ADVERTISEMENT

ಎಲ್ಲ ತಾಲ್ಲೂಕು ಕೇಂದ್ರಗಳು, ಪ್ರಮುಖ ಹೋಬಳಿಗಳಲ್ಲೂ ಮತಗಟ್ಟೆಗಳಿದ್ದವು.

ಹಟ್ಟಿ ಚಿನ್ನದ ಗಣಿ:  ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಿತು.

ಮತಗಟ್ಟೆಯಲ್ಲಿ ಒಟ್ಟು 394 ಮತದಾರರಿದ್ದರು. ಇವರಲ್ಲಿ 83 ಮಹಿಳೆಯರು ಹಾಗೂ 192 ಪುರುಷರು ಮತದಾನ ಮಾಡಿದರು.
ಮತದಾರರಲ್ಲಿ ಬಹುತೇಕ ಮಂದಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರಿದ್ದರು. ಮತಗಟ್ಟೆ ಅಧಿಕಾರಿಗಳ ಪ್ರಕಾರ ಶೇ 69.79 ಮತದಾನವಾಗಿದೆ.

ಕವಿತಾಳ: ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪಟ್ಟಣದ ಮತ ಕೇಂದ್ರದಲ್ಲಿ 201 ಮತಗಳು ಚಲಾವಣೆಯಾಗಿವೆ. ಒಟ್ಟು 294 ಮತದಾರರಲ್ಲಿ 168 ಪುರುಷ ಮತ್ತು 33 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಸಿರವಾರ ವರದಿ : ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 75 ರಷ್ಟು ಮತದಾನ ಶಾಂತಿಯುತವಾಗಿ ನಡೆಯಿತು.

86 ಮತಗಟ್ಟೆಯ ಕೇವಲ ಒಂದು ಮತಗಟ್ಟೆಯನ್ನು ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಮತದಾನವು ಸಂಜೆ 5 ಗಂಟೆಯವರೆಗೆ ನಡೆಯಿತು. ಒಟ್ಟು 379 ಮತದಾರರಲ್ಲಿ 286 ಮತದಾರರು ಮತ ಚಲಾಯಿಸಿದರು.

ಮಸ್ಕಿ ವರದಿ: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ನಡೆದ‌ ಚುನಾವಣೆಯಲ್ಲಿ ಪಟ್ಟಣದ‌ ಪುರಸಭೆ ಮತಗಟ್ಟೆಯಲ್ಲಿ ಶೇ 70 ರಷ್ಟು ಮತದಾನವಾಗಿದೆ. ಪಟ್ಟಣದಲ್ಲಿ ಒಟ್ಟು 471 ಪದವೀಧರರು ಮತದಾರರು ಇದ್ದು ಅದರಲ್ಲಿ 331 ಮತದಾರರು ಮತ ಚಲಾಯಿಸಿದ್ದಾರೆ.

ಇದರಲ್ಲಿ 270 ಪುರುಷ ಮತದಾರರು, 61 ಮಹಿಳಾ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಮತದಾನ ಶಾಂತಿಯುತವಾಗಿ‌ ನಡೆಯಿತು ಎಂದು ಸರ್ಕಲ್ ಇನ್ ಸ್ಪೆಕ್ಟರ್ ಚನ್ನಯ್ಯ ಹಿರೇಮಠ ತಿಳಿಸಿದ್ದಾರೆ.

ಮಾನ್ವಿ ವರದಿ: ವಿಧಾನ ಪರಿಷತ್‌ ಈಶಾನ್ಯ ವಲಯದ ಪದವೀಧರರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ71.5ರಷ್ಟು ಮತದಾನವಾಗಿದೆ.

ತಾಲ್ಲೂಕಿನ ಮಾನ್ವಿ, ಹಿರೇಕೊಟ್ನೇಕಲ್‌, ಕಲ್ಲೂರು, ಸಿರವಾರ ಮತ್ತು ಕವಿತಾಳದಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾನ ಪ್ರಕ್ರಿಯೆ ಎಲ್ಲೆಡೆ ಶಾಂತಿಯುತವಾಗಿತ್ತು. ಬೆಳಗ್ಗೆ ಮತದಾನ ಚುರುಕಿನಿಂದ ಕೂಡಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಆರಂಭವಾದ ಕಾರಣ ಮತದಾರರು ಮತಗಟ್ಟೆಗಳ ಕಡೆಗೆ ಸುಳಿಯಲಿಲ್ಲ. ಮಧ್ಯಾಹ್ನದ ನಂತರ ಮಳೆ ನಿಂತ ಕಾರಣ ಪದವೀಧರರ ಮತಗಟ್ಟೆ ಬಂದು ಹಕ್ಕು ಚಲಾಯಿಸಿದರು.

‌ಒಟ್ಟು 1960 ಮತದಾರರ ಪೈಕಿ ಮಾನ್ವಿಯಲ್ಲಿ 547, ಹಿರೇಕೊಟ್ನೇಕಲ್‌ನಲ್ಲಿ 142, ಕಲ್ಲೂರಿನಲ್ಲಿ 218, ಸಿರವಾರದಲ್ಲಿ 286 ಹಾಗೂ ಕವಿತಾಳದಲ್ಲಿ 201 ಮತದಾರರು ಮತದಾನ ಮಾಡಿದ್ದಾರೆ.

ಮಾನ್ವಿಯಲ್ಲಿ 547 ಮಂದಿ ಮತದಾನ

ಮಾನ್ವಿ: ವಿಧಾನ ಪರಿಷತ್‌ ಈಶಾನ್ಯ ವಲಯದ ಪದವೀಧರರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ71.5ರಷ್ಟು ಮತದಾನವಾಗಿದೆ.

ತಾಲ್ಲೂಕಿನ ಮಾನ್ವಿ, ಹಿರೇಕೊಟ್ನೇಕಲ್‌, ಕಲ್ಲೂರು, ಸಿರವಾರ ಮತ್ತು ಕವಿತಾಳದಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾನ ಪ್ರಕ್ರಿಯೆ ಎಲ್ಲೆಡೆ ಶಾಂತಿಯುತವಾಗಿತ್ತು. ಬೆಳಗ್ಗೆ ಮತದಾನ ಚುರುಕಿನಿಂದ ಕೂಡಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಆರಂಭವಾದ ಕಾರಣ ಮತದಾರರು ಮತಗಟ್ಟೆಗಳ ಕಡೆಗೆ ಸುಳಿಯಲಿಲ್ಲ. ಮಧ್ಯಾಹ್ನದ ನಂತರ ಮಳೆ ನಿಂತ ಕಾರಣ ಪದವೀಧರರ ಮತಗಟ್ಟೆಗಳ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

‌ಒಟ್ಟು 1960ಮತದಾರರ ಪೈಕಿ ಮಾನ್ವಿಯಲ್ಲಿ 547, ಹಿರೇಕೊಟ್ನೇಕಲ್‌ನಲ್ಲಿ 142, ಕಲ್ಲೂರಿನಲ್ಲಿ 218, ಸಿರವಾರದಲ್ಲಿ 286 ಹಾಗೂ ಕವಿತಾಳದಲ್ಲಿ 201 ಮತದಾರರು ಮತದಾನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.