ADVERTISEMENT

‘ಕೆಜೆಪಿಯಿಂದ ವ್ಯಕ್ತಿಗೆ ಬೆಂಬಲ, ಪಕ್ಷಕ್ಕೆ ಅಲ್ಲ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 10:29 IST
Last Updated 22 ಮಾರ್ಚ್ 2014, 10:29 IST

ಶಹಾಪುರ: ‘ಕೆಜೆಪಿ ಪಕ್ಷವು  ರಾಯ­ಚೂರು ಲೋಕಸಭೆಯ ಅಭ್ಯರ್ಥಿ ಕೆ.ಶಿವಣ್ಣಗೌಡ ನಾಯಕ ಅವರಿಗೆ ಬಾಹ್ಯ ಬೆಂಬಲ ನೀಡಲಾಗವುದು. ಬಿಜೆಪಿ ಪಕ್ಷಕ್ಕೆ ಅಲ್ಲ’ ಎಂದು ಶಾಸಕ ಗುರು ಪಾಟೀಲ್‌ ಶಿರವಾಳ ಸ್ಪಷ್ಟಪಡಿಸಿದರು.

ಪಟ್ಟಣದ ಚರಬಸವೇಶ್ವರ ಗದ್ದು­ಗೆಯ ಕಲ್ಯಾಣ ಮಂಟಪದಲ್ಲಿ ಶುಕ್ರ­ವಾರ  ಕೆಜೆಪಿ ಕಾರ್ಯಕರ್ತರ ಸಭೆ­ಯಲ್ಲಿ ಮಾತನಾಡಿದ ಅವರು, ಇದು ಕಾರ್ಯಕರ್ತರ ಒಮ್ಮತದ ನಿರ್ಧಾರ­ವಾಗಿದೆ. ನಮಗೆ ವಿಷಯಾಧಾರಿತ ವ್ಯಕ್ತಿಗೆ ನಮ್ಮ ಪಕ್ಷವು ಬೆಂಬಲಿಸಲಿದೆ. ಬಿಜೆಪಿ ಪಕ್ಷಕ್ಕೆ ಅಲ್ಲ ಅನಾವಶ್ಯಕವಾಗಿ ಗೊಂದಲ ಉಂಟು ಮಾಡಿ ಬಿಜೆಪಿ­ಯಲ್ಲಿ ಸೇರ್ಪಡೆ ಎಂಬುವುದು ಸರಿ­ಯಲ್ಲ ಎಂದು ಅವರು ತಿಳಿಸಿದರು.

ಹಿಂದೆ ನಮ್ಮ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿದ್ದರು ಅವರ ನಿರ್ಧಾರ­ದಂತೆ ಪಕ್ಷ ತೊರೆದು ಸ್ವತಂತ್ರವಾಗಿ ಪುರಸಭೆ ಚುನಾವಣೆ ಎದುರಿಸಿದೆವು. ನಂತರ ವಿಧಾನಸಭಾ ಚುನಾವಣೆ­ಯಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಇತಿಹಾಸ ನಿರ್ಮಿಸಿದೆವು. ರಾಜಕೀಯ ಬದಲಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೆಜೆಪಿ ಮುಖಂಡರು ಸೇರ್ಪಡೆ­ಯಾದರು ನಾವು ಮಾತ್ರ ಕೆಜೆಪಿಯಲ್ಲಿ ಉಳಿದುಕೊಂಡಿದ್ದೇವೆ. ಕಾರ್ಯಕರ್ತರ ನಿರ್ಧಾರ ನಮ್ಮ ಅಂತಿಮ ನಿರ್ಧಾರ­ವಾಗಿದೆ ಎಂದು ಹೇಳಿದರು.

ಕೆಜೆಪಿ ಪಕ್ಷದ ಮುಖಂಡರಾದ ಭೀಮಯ್ಯಗೌಡ ಕಟ್ಟಿಮನಿ, ಮಲ್ಲಣ್ಣ ಮಡ್ಡಿ ಸಾಹು, ಅಮಾತೆಪ್ಪ ಕಂದಕೂರ, ಡಾ.ಚಂದ್ರಶೇಖರ ಸುಬೇದಾರ, ರಾಮ­ಚಂದ್ರ ಕಾಶಿರಾಜ, ತಾಹೇರಪಾಶ ಕೆಂಭಾವಿ, ಮೋನಯ್ಯ ಹೊಸ್ಮನಿ, ಪುರಸಭೆ ಸದಸ್ಯರಾದ ವಸಂತ ಸುರ­ಪುರ­ಕರ್‌, ಬಸವರಾಜ ಆನೇಗುಂದಿ, ದೊಡ್ಡ ಮಾನಯ್ಯ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.