ತುರ್ವಿಹಾಳ: ‘ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ವಾರ್ಷಿಕ ₹54.44 ಲಕ್ಷ ಲಾಭ ಮಾಡಿದೆ’ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ವೀರೇಶ ನಾಯ್ಕರ್ ಹೇಳಿದರು.
ಶುಕ್ರವಾರ ಸ್ಥಳೀಯ ಕಾರ್ಯಾಲಯದಲ್ಲಿ ನಡೆದ ಸಂಘದ 2023-24ನೇ ವಾರ್ಷಿಕ ಮಹಾಸಭೆ ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಕರಿಲಿಂಗಪ್ಪ ಹಳ್ಳಿ ಮಾತನಾಡಿ, ‘ಸಹಕಾರಿ ಸಂಘ ಅಭಿವೃದ್ಧಿಯಾಗಲು ಸಂಘದ ಸದಸ್ಯರ ಹಾಗೂ ಗ್ರಾಹಕರ ಸಹಕಾರ ಅಗತ್ಯವಾಗಿದೆ’ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಶ್ಯಮೀದ ಸಾಬ್, ಮಲ್ಲನಗೌಡ ದೇವರಮನಿ, ಮೌಲಪ್ಪಯ್ಯ, ಉಮರಸಾಬ್, ಆರ್.ಶಿವನಗೌಡ, ತಿರುಪತೆಪ್ಪ ನಾಯಕ, ಕೃಷಿ ಸಹಕಾರಿ ಸಂಘದ ಉಪಾಧ್ಯಕ್ಷ ಚಾಂದ್ ಪಾಷಾ, ಸದಸ್ಯರಾದ ಮಂಟೆಪ್ಪ ಎಲೆಕೂಡ್ಗಿ, ಚಿನ್ನಪ್ಪ ಕಾರಟಗಿ, ರುದ್ರಸ್ವಾಮಿ ಕೆಂಡದಮಠ, ನಾಗರಾಜ ಶೆಟ್ಟಿ, ದೊಡ್ಡಪ್ಪ ನವಲಳ್ಳಿ, ಬಸಮ್ಮ ಗದ್ರಟಗಿ, ರೇಣುಕಮ್ಮ ಹತ್ತಿಗುಡ್ಡ, ಹುಲಿಗೆಮ್ಮ ದೇವರಮನಿ, ಲಕ್ಷ್ಮೀ ಭಂಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.