ರಾಯಚೂರು: ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ 1103 ದಿನ ಪೂರೈಸಿತು.
ಹಿಂದುಳಿದ, ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಸಂಸ್ಥೆಯನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನಿರಂತರ ಧರಣಿ ನಡೆಸಿದರೂ ಕೇಂದ್ರ ಸರ್ಕಾರ ಸ್ಪಂದಿಸದೇ ಇರುವ ಬಗ್ಗೆ ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.
ಅಶೋಕಕುಮಾರ ಜೈನ್, ಡಾ. ಎಸ್. ಎಸ್. ಪಾಟೀಲ, ಡಾ. ಜಗದೀಶ ಪುರತಿಪ್ಲಿ, ವಕೀಲ ಎಸ್. ಮಾರೆಪ್ಪ, ಎಸ್. ತಿಮ್ಮಾರೆಡ್ಡಿ, ವಿನಯಕುಮಾರ ಚಿತ್ರಗಾರ, ಮಲ್ಲನಗೌಡ ಹದ್ದಿನಾಳ್, ಅಮರೇಗೌಡ ಪಾಟೀಲ, ಮೊಹಮದ್ ಇಸಾಕ್ , ಜೈ ಭೀಮ್, ವೆಂಕಟ್ ರೆಡ್ಡಿ ದಿನ್ನಿ, ಬಸವರಾಜ ಮಿಮಿಕ್ರಿ, ಅನ್ವರ್ ಪಾಷಾ, ಕೆ. ವೀರೇಶ, ಮೈತ್ರೀಕರ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.