ADVERTISEMENT

ಬಡ ವಿಧವೆಗೆ ನೆರವು ನೀಡಿದ ಕೆನರಾ ಬ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 13:26 IST
Last Updated 14 ಆಗಸ್ಟ್ 2021, 13:26 IST
ಕೆನರಾ ಬ್ಯಾಂಕ್‌ ರಾಯಚೂರು ವಲಯ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಪತಿ ಕಳೆದುಕೊಂಡ ಕಡುಬಡತನದ ವಿಧವೆಗೆ ₹25 ಸಾವಿರ ಮೊತ್ತದ ಚೆಕ್‌ ನೆರವು ನೀಡಲಾಯಿತು
ಕೆನರಾ ಬ್ಯಾಂಕ್‌ ರಾಯಚೂರು ವಲಯ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಪತಿ ಕಳೆದುಕೊಂಡ ಕಡುಬಡತನದ ವಿಧವೆಗೆ ₹25 ಸಾವಿರ ಮೊತ್ತದ ಚೆಕ್‌ ನೆರವು ನೀಡಲಾಯಿತು   

ರಾಯಚೂರು: ಕೆನರಾ ಬ್ಯಾಂಕ್‌ ರಾಯಚೂರು ವಲಯ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಶನಿವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೋವಿಡ್‌ ಮಹಾಮಾರಿಗೆ ಪತಿಯನ್ನು ಕಳೆದುಕೊಂಡ ಕಡುಬಡತನದ ವಿಧವೆಗೆ ಹಣಕಾಸಿನ ನೆರವು ಒದಗಿಸಲಾಯಿತು. ₹25 ಸಾವಿರ ಮೊತ್ತದ ಚೆಕ್‌ನ್ನು ಬಡವಿಧವೆ ಪಾರ್ವತಿ ಶೆಟ್ಟಿ ಅವರಿಗೆ ಬ್ಯಾಂಕ್‌ ಅಧಿಕಾರಿಗಳು ಹಸ್ತಾಂತರಿಸಿದರು.

ಕೆನರಾ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕರಾದ ವಿಪಿನ್‌ ಕುಮಾರ್‌ ಸಿಂಗ್‌ ಮತ್ತು ಶಿವಕುಮಾರ್‌ ಎಸ್‌. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.