ADVERTISEMENT

ಬಿಡಾಡಿ ದನಗಳೆಲ್ಲ ಗೋಶಾಲೆಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 14:09 IST
Last Updated 2 ಅಕ್ಟೋಬರ್ 2019, 14:09 IST

ರಾಯಚೂರು: ನಗರದ ರಸ್ತೆಗಳಲ್ಲಿ ವಾಹನಗಳು ಮತ್ತು ಜನ ಸಂಚಾರಕ್ಕೆ ತೊಂದರೆ ಕೊಡುವ ಬಿಡಾಡಿ ದನಗಳನ್ನೆಲ್ಲ ಆಲಿಕೂರು ಗ್ರಾಮದ ಗೋಶಾಲೆಗೆ ಸಾಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ನಗರಸಭೆ ಹಾಗೂ ಜಿಲ್ಲಾ ಪೊಲೀಸರು ಈ ಕಾರ್ಯಾಚರಣೆ ಆರಂಭಿಸಿ ಮೂರು ತಿಂಗಳುಗಳಾಗಿದೆ. ಈ ಬಗ್ಗೆ ಪದೆಪದೆ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಲಾಗಿದೆ. ಬಿಡಾಡಿ ದನಗಳನ್ನು ಮರಳಿ ತೆಗೆದುಕೊಂಡು ಹೋದವರು ನಿಯಮ ಪಾಲನೆ ಮಾಡುತ್ತಿಲ್ಲ. ರಸ್ತೆಗೆ ದನಗಳನ್ನು ಬಿಡುವುದು ಮರುಕಳಿಸುತ್ತಿದೆ.

ಅಕ್ಟೋಬರ್‌ 1 ರ ರಾತ್ರಿಯಿಂದಲೇ ವಿವಿಧ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿ, ಬಿಡಾಡಿ ದನಗಳನ್ನು ಮಹಿಳಾ ಸಮಾಜ ಆವರಣದಲ್ಲಿ ಇರಿಸಲಾಗಿದೆ. ಇನ್ನು ಮುಂದೆ ಬಿಡಾಡಿ ದನಗಳು ಕಂಡುಬಂದಲ್ಲಿ ಗೋಶಾಲೆಗೆ ರವಾನಿಸುವ ಕಾರ್ಯ ನಡೆಯಲಿದೆ. ಜನರು ಇದಕ್ಕೆಲ್ಲ ಸಹಕರಿಸಿ ಕಾರ್ಯಾಚರಣೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.