ADVERTISEMENT

ಕರಪತ್ರ ಹಂಚಿ ಕೋವಿಡ್ ಜಾಗೃತಿ

​ಪ್ರಜಾವಾಣಿ ವಾರ್ತೆ
Published 2 ಮೇ 2021, 14:17 IST
Last Updated 2 ಮೇ 2021, 14:17 IST
ಸಿಂಧನೂರಿನ ವಾರ್ಡ್ ನಂ.31 ರಲ್ಲಿ ಕೋವಿಡ್‌ ಜಾಗೃತಿ ಮೂಡಿಸಲಾಯಿತು
ಸಿಂಧನೂರಿನ ವಾರ್ಡ್ ನಂ.31 ರಲ್ಲಿ ಕೋವಿಡ್‌ ಜಾಗೃತಿ ಮೂಡಿಸಲಾಯಿತು   

ಸಿಂಧನೂರು: ರಾಯಚೂರು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮಾರ್ಗದರ್ಶನದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಭಾನುವಾರ ಸಿಂಧನೂರು ನಗರದ ವಾರ್ಡ್ ನಂ.31 ಮತ್ತು ಸಾಲಗುಂದಾ ಗ್ರಾಮದಲ್ಲಿ ಕರಪತ್ರ ಹಂಚುವ ಮೂಲಕ ಕೋವಿಡ್ ಜಾಗೃತಿ ಮೂಡಿಸಿದರು.

ದೇಶದಾದ್ಯಂತ ಕೊರೊನಾ ಹಾವಳಿಯಿಂದ ಸಾವು-ನೋವುಗಳು ಸಂಭವಿಸುತ್ತಿವೆ. ಕೊರೊನಾ ಕುರಿತು ಭಯಪಡಬೇಕಾಗಿಲ್ಲ. ಆದರೆ ಜಾಗೃತರಾಗಿರಬೇಕು. ನಿಷ್ಕಾಳಜಿ ವಹಿಸಿದರೆ ಜೀವಕ್ಕೆ ಅಪಾಯ ಆಗಬಹುದು. ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಜನರಿಗೆ ಸಲಹೆ ನೀಡಿದರು.

ಕಾರ್ಮಿಕ ಮುಖಂಡರಾದ ಸಾದಪ್ಪ, ಗೇಸುದರಾಜ್, ಗರೀಬ್‍ಸಾಬ, ಅಳ್ಳಪ್ಪ ಹಡಪದ, ಚಿದಾನಂದ, ಓಬಳೇಶ, ಸರ್ವರ್‍ಸಾಬ ಮಕಾಂದರ್ ಸಾಲಗುಂದಾ, ಶೇಖರ್ ಪೇಂಟರ್, ಖಾದರ್ ಮೇಸ್ತ್ರಿ, ರಾಜು ಪೇಂಟರ್ ಅಡವಿಬಾವಿ ಹಾಗೂ ನವಿನ್‍ಕುಮಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.