ADVERTISEMENT

‘ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 11:16 IST
Last Updated 16 ಏಪ್ರಿಲ್ 2021, 11:16 IST
ಮುದಗಲ್ ಪಟ್ಟಣ ಸಮೀಪದ ಮಾಕಾಪುರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿರೂಪಾಕ್ಷಪ್ಪ ಅವರು ಹೂನೂರು ಗ್ರಾಮದಲ್ಲಿ ಕೋವಿಡ್ -19 ಲಸಿಕೆ ಕುರಿತು ಜಾಗೃತಿ ಮೂಡಿಸಿದರು
ಮುದಗಲ್ ಪಟ್ಟಣ ಸಮೀಪದ ಮಾಕಾಪುರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿರೂಪಾಕ್ಷಪ್ಪ ಅವರು ಹೂನೂರು ಗ್ರಾಮದಲ್ಲಿ ಕೋವಿಡ್ -19 ಲಸಿಕೆ ಕುರಿತು ಜಾಗೃತಿ ಮೂಡಿಸಿದರು   

ಮುದಗಲ್: ಕೊರೊನಾ ವೈರಸ್ ತಡೆಗಟ್ಟಲು 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್ -19 ಲಸಿಕೆ ಹಾಕಿಸಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ. ವಿರೂಪಾಕ್ಷಪ್ಪ ಅವರು ಹೇಳಿದರು.

ಮುದಗಲ್ ಪಟ್ಟಣ ಸಮೀಪದ ಮಾಕಾಪುರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹೂನೂರು ಗ್ರಾಮದಲ್ಲಿ ಕೋವಿಡ್ -19 ಲಸಿಕೆ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.

’ಲಸಿಕೆ ಬಗ್ಗೆ ಯಾವುದೇ ಆತಂಕ ಬೇಡ. ಆರೋಗ್ಯ ಇಲಾಖೆ ಸದಾ ನಿಮ್ಮೊಂದಿಗೆ ಇದೆ. ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಈ ವೈರಸ್ ಬಗ್ಗೆ ಭಯ ಪಡದೆ ಜಾಗೃತಿಯಿಂದ ಇರಬೇಕು‘ ಎಂದರು.

ADVERTISEMENT

ಹಿರಿಯ ಆರೋಗ್ಯ ಸಹಾಯಕ ಜಲಾಲ್, ಕಿರಿಯ ಆರೋಗ್ಯ ಸಹಾಯಕ ಲಿಂಗರಾಜ ಸಿದ್ದೇಶ, ಮಹೇಶ್ವರಿ, ಗ್ರಾಮ ಪಂಚಾಯಿತಿ ಸದಸ್ಯ ವೆಂಕನಗೌಡ ಹೊಸಗೌಡ್ರ, ಬಾಲಸ್ವಾಮಿ ಕಟ್ಟಿಮನಿ, ಹೂನೂರು ಗ್ರಾಮಸ್ಥರಾದ ಶರಣಪ್ಪ ಬಾವಿಕಟ್ಟಿ, ಅಮರೇಶ ಬಾವಿಕಟ್ಟಿ, ಚಂದ್ರಕಾಂತ ಕುಲಕರ್ಣಿ, ಶ್ಯಾಮ ಸುಂದರ ಬಡಿಗೇರ, ಹನುಮಂತ, ಸಿದ್ದಣ್ಣ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.