ರಾಯಚೂರು: ನಗರದ ಹೊರವಲಯದ ಮನ್ಸಲಾಪುರ ಕೆರೆಯಲ್ಲಿ ಗುರುವಾರ ಮೊಸಳೆ ಪ್ರತ್ಯೇಕ್ಷವಾಗಿದ್ದು, ಗ್ರಾಮಸ್ಥರು ಭಯ ಪಡುವಂತಾಗಿದೆ.
ಕೆರೆಯೊಳಗಿನ ಕಲ್ಲುಬಂಡೆಯ ಮೇಲೆ ಮೊಸಳೆ ಇರುವುದನ್ನು ನೋಡಿ, ಯುವಕನೊಬ್ಬ ಛಾಯಾಚಿತ್ರ ಸೆರೆಹಿಡಿದಿದ್ದ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕೆರೆಯ ಸುತ್ತಮುತ್ತ ಜನರು ಹೋಗಬಾರದು ಮತ್ತು ಕೆರೆಯಲ್ಲಿ ಜಾನುವಾರುಗಳು ತೆರಳದಂತೆ ಸೂಚನಾ ಫಲಕ ಹಾಕುವುದಕ್ಕೆ ಗ್ರಾಮ ಪಂಚಾಯಿತಿಗೆ ತಿಳಿಸಲಾಗಿದೆ. ಈಗಾಗಲೇ ಕೆರೆ ಪಕ್ಕದಲ್ಲಿ ಈ ಬಗ್ಗೆ ಸೂಚನಾ ಫ್ಲೆಕ್ಸ್ ಅಳವಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.