ADVERTISEMENT

ಶಿಕ್ಷಣ ಜಾಗೃತಿ ಮೂಡಿಸಲು ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 13:15 IST
Last Updated 29 ಜನವರಿ 2022, 13:15 IST
ಬೆಂಗಳೂರಿನ ಹೇಮಂತ್ ಹಾಗೂ ಧನುಷ್ ಸೈಕಲ್ ಜಾಥಾ ಆರಂಭಿಸಿದ್ದು ಶುಕ್ರವಾರ ರಾಯಚೂರಿಗೆ ಆಗಮಿಸಿದಾಗ ರೋಟರಿ ಕ್ಲಬ್ ನ ಸದಸ್ಯರು ಕೃಷಿ ವಿಶ್ವವಿದ್ಯಾಲಯದ ಬಳಿ ಸನ್ಮಾನಿಸಿ ಅಭಿನಂದಿಸಿದರು
ಬೆಂಗಳೂರಿನ ಹೇಮಂತ್ ಹಾಗೂ ಧನುಷ್ ಸೈಕಲ್ ಜಾಥಾ ಆರಂಭಿಸಿದ್ದು ಶುಕ್ರವಾರ ರಾಯಚೂರಿಗೆ ಆಗಮಿಸಿದಾಗ ರೋಟರಿ ಕ್ಲಬ್ ನ ಸದಸ್ಯರು ಕೃಷಿ ವಿಶ್ವವಿದ್ಯಾಲಯದ ಬಳಿ ಸನ್ಮಾನಿಸಿ ಅಭಿನಂದಿಸಿದರು   

ರಾಯಚೂರು: ಶಿಕ್ಷಣ ಜಾಗೃತಿ ಹಾಗೂ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆ ಖಂಡಿಸಿ ಬೆಂಗಳೂರಿನ ಹೇಮಂತ್ ಹಾಗೂ ಧನುಷ್ ಸೈಕಲ್ ಜಾಥಾ ನಡಿಸಿದ್ದು, ಶುಕ್ರವಾರ ರಾಯಚೂರಿಗೆ ಆಗಮಿಸಿ ಜಾಗೃತಿ ಮೂಡಿಸಿದರು.

ಕಳೆದ ಜುಲೈ 10ರಂದು ಬೆಂಗಳೂರಿನಿಂದ ಸೈಕಲ್ ಜಾಥಾ ಆರಂಭಿಸಿದ್ದು 24 ಸಾವಿರ ಕಿ.ಮೀ ಸಂಚರಿಸಿ ಲಿಮ್ಕಾ ದಾಖಲೆ ಮಾಡುವ ಆಸೆ ಇದೆ. ಪ್ರತಿದಿನ 110ರಿಂದ 120 ಕಿ.ಮೀ ಪ್ರಯಾಣ ಮಾಡುತ್ತಿದ್ದೇವೆ ಎಂದು ಹೇಮಂತ್ ಹಾಗೂ ಧನುಷ್ ತಿಳಿಸಿದರು.

ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ನಿಜಾನಂದರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಶಿವನಗೌಡ ಪಾಟೀಲ, ವಿಜಯ ಕುಮಾರ ಸಜ್ಜನ ಇಬ್ಬರನ್ನು ಸ್ವಾಗತಿಸಿ ಜಾಥಾಗೆ ಬೆಂಬಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.