
ಲಿಂಗಸುಗೂರು: ಪಿಕಾರ್ಡ್ ಬ್ಯಾಂಕ್ನ ಆಡಳಿತ ಮಂಡಳಿಯ 11 ನಿರ್ದೇಶಕ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು.
ಒಟ್ಟು 14 ಸ್ಥಾನಗಳ ಪೈಕಿ 3 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗೆ ಪಟ್ಟಣದ ಮಹ್ಮದೀಯ ಉರ್ದು ಪ್ರೌಢಶಾಲೆಯಲ್ಲಿ ಮತದಾನ ನಡೆಯಿತು.
ವಿಜಯಶಾಲಿಗಳು: ಸಾಲಗಾರ (ಸಾಮಾನ್ಯ) ಮಸ್ಕಿ ಕ್ಷೇತ್ರದಿಂದ ಮಲ್ಲಿಕಾರ್ಜುನ ಪರಡ್ಡಿ, ಕೋಠಾ ಕ್ಷೇತ್ರದಿಂದ ಚೆನ್ನಬಸಪ್ಪ, ಆನೆಹೊಸೂರು ಕ್ಷೇತ್ರದಿಂದ ಬಸನಗೌಡ ಮೇಟಿ, ನಿಲೋಗಲ್ ಕ್ಷೇತ್ರದಿಂದ ಶಿವನಗೌಡ, ಮಾವಿನಭಾವಿ ಕ್ಷೇತ್ರದಿಂದ ವೆಂಕನಗೌಡ, ನಾಗರಾಳ ಕ್ಷೇತ್ರದಿಂದ ವಿರೂಪಾಕ್ಷಪ್ಪ, ನಾಗಲಾಪುರ ಕ್ಷೇತ್ರದಿಂದ ಸಿದ್ಧನಗೌಡ, ಸಾಲಗಾರ (ಪರಿಶಿಷ್ಟ ಪಂಗಡ) ಗುರುಗುಂಟಾ ಕ್ಷೇತ್ರದಿಂದ ಭೀಮರಾಯ, ಸಾಲಗಾರ (ಪರಿಶಿಷ್ಟ ಜಾತಿ) ಮುದಗಲ್ ಕ್ಷೇತ್ರದಿಂದ ಹುಸೇನಪ್ಪ, ಸಾಲಗಾರ (ಮಹಿಳೆ) ಲಿಂಗಸುಗೂರು ಕ್ಷೇತ್ರದಿಂದ ಯಂಕಮ್ಮ, ಸಾಲಗಾರರಲ್ಲದ ಲಿಂಗಸುಗೂರು ತಾಲ್ಲೂಕು ಪೂರ್ಣ ಕ್ಷೇತ್ರದಿಂದ ಸಿದ್ರಾಮೇಶ ಗೆಲುವು ಸಾಧಿಸಿದ್ದಾರೆ.
ಅವಿರೋಧ ಆಯ್ಕೆ: ಮಟ್ಟೂರು ಕ್ಷೇತ್ರದಿಂದ ಶಂಭುಲಿಂಗಮ್ಮ, ಆಮದಿಹಾಳ ಕ್ಷೇತ್ರದಿಂದ ಶರಣಪ್ಪ, ಸಂತೆಕೆಲ್ಲೂರು ಕ್ಷೇತ್ರದಿಂದ ಶಿವಗ್ಯಾನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯೋತ್ಸವ: ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಬಣದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸಿದ್ದರಿಂದ ಮತದಾನ ಕೇಂದ್ರದ ಬಳಿ ಮುಖಂಡರು ವಿಜಯೋತ್ಸವ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.