ADVERTISEMENT

ಕವಿತಾಳ: ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 10:42 IST
Last Updated 21 ಸೆಪ್ಟೆಂಬರ್ 2022, 10:42 IST
 ಸುಭಾನ್ ಸಾಬ್ ಲಾಳೇಸಾಬ್ ಚಿಂಚಿರಿಕಿ
ಸುಭಾನ್ ಸಾಬ್ ಲಾಳೇಸಾಬ್ ಚಿಂಚಿರಿಕಿ   

ಕವಿತಾಳ (ರಾಯಚೂರು ಜಿಲ್ಲೆ): ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಪಟ್ಟಣದ 7ನೇ ವಾರ್ಡ್ ನಿವಾಸಿ ಸುಭಾನ್ ಸಾಬ್ ಲಾಳೇಸಾಬ್ ಚಿಂಚಿರಿಕಿ (53) ಮೃತ ವ್ಯಕ್ತಿ. ಮೃತನಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.


'ವಿದ್ಯುತ್ ಸರಬರಾಜು ಸ್ಥಗಿತವಾದ ಸಂದರ್ಭದಲ್ಲಿ ಜಮೀನಿನಲ್ಲಿ ಕೊಳವೆಭಾವಿಯ ಸ್ಟಾರ್ಟರ್ ಸ್ಪರ್ಶಿಸಿದ್ದಾರೆ. ಇದ್ದಕ್ಕಿಂದಂತೆ ವಿದ್ಯುತ್ ಹರಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ. ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.