ಲಿಂಗಸುಗೂರು: ರಾಜಕೀಯ ದ್ವೇಷ ಸಾಧಿಸಿದ ಪರಾಭವಗೊಂಡಿದ್ದ ತಂಡದವರು ಜಯ ಸಾಧಿಸಿದ್ದ ಸದಸ್ಯೆಯ ಪುತ್ರನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಲಿಂಗಸುಗೂರು ತಾಲ್ಲೂಕಿನ ಗಡದನಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾಗಿದ್ದ ಹಣಮಂತಮ್ಮ ಅವರ ಪುತ್ರ ಶರಣಬಸವ (35) ಕೊಲೆಗೀಡಾಗಿದ್ದಾರೆ.
ಹಣಮಂತಮ್ಮ ನೀಡಿದ ದೂರು ಆಧರಿಸಿ ಗಡದನಾಳ ಗ್ರಾಮದ ಜಗದೀಶ ಶರಣಪ್ಪ, ಯಮಬೂರ ಅಮರಪ್ಪ, ಮಹಾಂಕಾಳೆಪ್ಪ ಅಮರಪ್ಪ, ಬಸವರಾಜ ಶರಣಪ್ಪ, ಹನುಮಂತಿ ಅಮರಪ್ಪ, ದುರುಗಪ್ಪ ನಿಂಗಪ್ಪ, ಶರಣಬಸವ ಮಾನಪ್ಪ, ಕೆಂಚವ್ವ ಮಾನಪ್ಪ, ಯಲ್ಲವ್ವ ನಿಂಗಪ್ಪ, ನಿಂಗಪ್ಪ ಅಮರಪ್ಪ ವಿರುದ್ಧ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.