ADVERTISEMENT

ಮಲ್ಲಮ್ಮನ ಆದರ್ಶ ಮಕ್ಕಳಿಗೆ ತಿಳಿಸಿ: ಮುರಘೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:40 IST
Last Updated 18 ಮೇ 2022, 4:40 IST
ಹಟ್ಟಿಚಿನ್ನದ ಗಣಿಯಲ್ಲಿ ಬಸವಸೇವ ಸಮಿತಿ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಮುಖಂಡರು ಉದ್ಘಾಟಿಸಿದರು
ಹಟ್ಟಿಚಿನ್ನದ ಗಣಿಯಲ್ಲಿ ಬಸವಸೇವ ಸಮಿತಿ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಮುಖಂಡರು ಉದ್ಘಾಟಿಸಿದರು   

ಹಟ್ಟಿಚಿನ್ನದಗಣಿ: ಮಹಿಳೆಯರು ಮಕ್ಕಳಿಗೆ ಸಂಸ್ಕೃತಿಯ ಜತೆಗೆ ಹೇಮರಡ್ಡಿ ಮಲ್ಲಮ್ಮನ ಆದರ್ಶಗಳನ್ನು ತಿಳಿಸಬೇಕು ಎಂದು ಸಿದ್ಧರಾಮೇಶ್ವರ ಮಠದ ಮುರಘೇಂದ್ರ ಸ್ವಾಮೀಜಿ ಹೇಳಿದರು.

ಬಸವಸೇವಾ ಸಮಿತಿ ಹಾಗೂ ಹೇಮರಡ್ಡಿ ಮಲ್ಲಮ್ಮ ಜನ ಕಲ್ಯಾಣ ಟ್ರಸ್ಟ್ ವತಿಯಿಂದ ಈಚೆಗೆ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಪ್ಯೂಟರ್ ಯುಗದಲ್ಲಿ ದೇವಸ್ಧಾನದ ಬದಲು ಶಾಲೆ ಕಟ್ಟಿಸಿ, ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸಿ. ಇದು ಸಮಾಜಕ್ಕೆ ಮಾದರಿಯಾಗಲಿದೆ ಎಂದರು.

ADVERTISEMENT

ದೇವರಭೂಪೂರ ಕ್ಷೇತ್ರದ ಅಭಿನವಗಜ ದಂಡ ಸ್ವಾಮೀಜಿ ಮಾತ ನಾಡಿ, ಯುವಕರು ದುಶ್ಚಟಗಳಿಗೆ ಬಲಿ ಯಾಗದೆ ಶಿಕ್ಷಿತರಾಗಿ. ಹಿರಿಯರ ಆದರ್ಶ ಗಳನ್ನು ಪಾಲಿಸಿ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಶರಣು ಗೌಡ ಪಾಟೀಲ ಬಯ್ಯಾಪೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಮ್ಮ ಜೇರಬಂಡಿ, ಮಲ್ಲಿಕಾರ್ಜುನ, ವಿಜಯಕುಮಾರ ಸಾಹುಕಾರ, ಶಂಕರಗೌಡ ಬಳಾಗಾ ನೂರು, ನಿಂಗನಗೌಡ, ದೇವಪ್ಪ, ಕಾರ್ಮಿಕ ಸಂಘದ ಅಧ್ಯಕ್ಷ ಎಂ. ಶಫಿ, ನಾಗರೆಡ್ಡಿ ಜೇರಬಂಡಿ, ಸಿದ್ದಪ್ಪ ಮುಂಡರಗಿ, ಸೋಮಣ್ಣ ನಾಯಕ, ಮಂಜುನಾಥ, ರೋಡಲಬಂಡ, ಅಮರೇಗೌಡ ಇಚನಾಳ, ನಾಗರಡ್ಡಿಪ್ಪ, ವಿರಪಾಕ್ಷ ನೀಲೋಗಲ್, ಮಲ್ಲನಗೌಡ ರೋಡಲಬಂಡ, ವಿರೇಶ, ಸುರೇಶ ಪಾಣಿ, ಮೇಧಿನಾಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.