ಸಿರವಾರ: ಅಕಾಲಿಕ ಮಳೆಗೆ ಹಾನಿಗೊಳಗಾಗಿರುವ ಬೆಳೆ ಸಮೀಕ್ಷೆ ಮಾಡಿ, ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಭತ್ತ, ತೊಗರಿ, ಹತ್ತಿ, ಮೆಣಸಿಕಾಯಿ, ಸಜ್ಜೆ ಸೇರಿದಂತೆ ಪ್ರತಿಯೊಂದು ಬೆಳೆಯು ನಾಶವಾಗಿದ್ದು, ಕೂಡಲೇ ನಷ್ಟವಾದ ಬೆಳೆಯನ್ನು ಸರ್ವೆ ಮಾಡಿ ಒಂದು ಹೆಕ್ಟೇರ್ ಪ್ರದೇಶಕ್ಕೆ ಕನಿಷ್ಠ ₹ 50 ಸಾವಿರ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಬೊಮ್ಮನಾಳ ಉಪಾಧ್ಯಯ ವೀರೇಶ ಗುಡದಿನ್ನಿ, ಹುಲಿಗೆಪ್ಪ ಮಡಿವಾಳ, ರಮೇಶ ಅಂಗಡಿ, ಎಚ್.ಕೆ.ಚನ್ನಬಸವ, ಚಂದ್ರು ಹಡಪದ, ಎಚ್.ಕೆ.ಬಸವರಾಜ, ಬಸವರಾಜ ಚಾಗಭಾವಿ, ವೆಂಕಟೇಶ ಲಕ್ಕಂದಿನ್ನಿ, ಕಾಶಪ್ಪ, ಶಿವಪ್ಪ ಸೇರಿದಂತೆ ರೈತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.