ADVERTISEMENT

ಮುದಗಲ್‌: ಆತಂಕ ಹುಟ್ಟಿಸಿದ ಚಿರತೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 12:13 IST
Last Updated 5 ನವೆಂಬರ್ 2019, 12:13 IST

ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮದುಗಲ್‌ ಹೋಬಳಿಯ ಆದಾಪುರದಲ್ಲಿ ಎತ್ತಿನ ಮೇಲೆ ಚಿರತೆ ದಾಳಿ ಮಾಡಿದ್ದು, ಕೂಡಲೇ ರೈತರು ಗಮನಿಸಿ ದೊಣ್ಣೆಯಿಂದ ಹೊಡೆದು ಓಡಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಎರಡು ವಾರಗಳಲ್ಲಿ ಮೂರನೇ ಬಾರಿ ಚಿರತೆ ಪ್ರತ್ಯಕ್ಷವಾಗಿದ್ದು,ರೈತರು ನಿರಾತಂಕದಿಂದ ಜಮೀನುಗಳಿಗೆ ಹೋಗಿ ಬರದಂತಾಗಿದೆ. ಚಿರತೆ ಹಿಡಿಯುವುದಕ್ಕಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್‌ ತಂದುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರೂ ಸಿಗುತ್ತಿಲ್ಲ.

ಆದಾಪುರ, ಆಮದಿಹಾಳ, ಹೂನೂರು ಹಾಗೂ ಸುತ್ತಲಿನ ಗ್ರಾಮಗಳ ಕಲ್ಲಿನ ಗುಡ್ಡಗಾಡುಗಳಲ್ಲಿ ಚಿರತೆ ತಪ್ಪಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಮುದಗಲ್‌ ಪಟ್ಟಣದ ಸುತ್ತಮುತ್ತ ಮಾತ್ರ ಹಸಿರು ಗುಡ್ಡಗಾಡು ಪ್ರದೇಶವಿದ್ದು, ಆಗಾಗ ಚಿರತೆಗಳು ಕಾಣಿಸುತ್ತಿವೆ. ಎರಡು ವರ್ಷಗಳ ಹಿಂದೆ, ಮುದಗಲ್‌ ಪಟ್ಟಣದ ಹೊರವಲಯದಲ್ಲಿ ಚಿರತೆಯೊಂದು ಸತ್ತು ಬಿದ್ದಿರುವುದುಪತ್ತೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.