ADVERTISEMENT

ಮಾನ್ವಿ: ಚಿರತೆ ದಾಳಿಗೆ ಕರು ಸಾವು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:44 IST
Last Updated 10 ಆಗಸ್ಟ್ 2022, 4:44 IST

ಮಾನ್ವಿ: ತಾಲ್ಲೂಕಿನ ನೀರಮಾನ್ವಿ ಗ್ರಾಮದ ಗುಡ್ಡದ ಸಮೀಪ ಚಿರತೆ ದಾಳಿಗೆ ಕರು ಮೃತಪಟ್ಟ ಘಟನ ಮಂಗಳವಾರ ನಡೆದಿದೆ.

ಗುಡ್ಡದ ಅಗಸರ ಕೆರೆ ಸಮೀಪ ಜಾನುವಾರು ಮೇಯುತ್ತಿದ್ದ ವೇಳೆ ಏಕಾಏಕಿಚಿರತೆ ದಾಳಿ ಮಾಡಿದೆ. ಆಂಜನೇಯ ಎಂಬುವರಿಗೆ ಸೇರಿದ ಕರುವನ್ನು ಎಳೆದೊಯ್ದಿದೆ. ಜನರ ಕೂಗಾಟ್ಟ ಜೋರಾಗುತ್ತಿದ್ದಂತೆ ಸ್ಥಳದಿಂದ ಓಡಿ ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನೀರಮಾನ್ವಿ ಬೆಟ್ಟದಲ್ಲಿಕಳೆದ 7 ತಿಂಗಳಿಂದ ಚಿರತೆ ಓಡಾಡುತ್ತಿರುವುದು ದೃಢಪಟ್ಟಿದೆ. ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ನಿರತವಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.