ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ತುಂತುರು ಮಳೆ ಶುರುವಾಗಿದೆ.
ಚಂಡಮಾರುತದ ಪರಿಣಾಮ ಗುರುವಾರದಿಂದ ತಂಪು ಹವಾಮಾನ ಆವರಿಸಿದೆ. ಬಿಸಿಲುನಾಡು ಎರಡು ದಿನಗಳಿಂದ ಮಲೆನಾಡಾಗಿ ಬದಲಾಗಿದೆ. ಎಲ್ಲೆಡೆಯೂ ಭತ್ತ ಮತ್ತು ಹತ್ತಿ ಕೊಯ್ಲು ಆರಂಭವಾಗಿತ್ತು. ಆದರೆ ಮಳೆಯಿಂದಾಗಿ ರೈತರಿಗೆ ತೊಂದರೆ ಆಗಿದೆ. ಎಂದಿನಂತೆ ಹತ್ತಿ, ಭತ್ತ ಮಾರುಕಟ್ಟೆಯಲ್ಲಿ ವಹಿವಾಟು ನಡೆಯುತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.