ADVERTISEMENT

ಧಾರವಾಡದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಕೊಲೆ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:12 IST
Last Updated 28 ಜನವರಿ 2026, 6:12 IST
ಲಿಂಗಸುಗೂರು ಪಟ್ಟಣದ ಗಡಿಯಾರ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿಸಿ ವಿದ್ಯಾರ್ಥಿನಿಗೆ ಸಂತಾಪ ಸೂಚಿಸಲಾಯಿತು
ಲಿಂಗಸುಗೂರು ಪಟ್ಟಣದ ಗಡಿಯಾರ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿಸಿ ವಿದ್ಯಾರ್ಥಿನಿಗೆ ಸಂತಾಪ ಸೂಚಿಸಲಾಯಿತು   

ಲಿಂಗಸುಗೂರು: ಧಾರವಾಡದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಖಂಡಿಸಿ ಅಂಜುಮನ್ ಎ ಮುಸ್ಲಿಮೀನ್‌ ಸಮಿತಿ ಪದಾಧಿಕಾರಿಗಳು ಸೋಮವಾರ ಪಟ್ಟಣದ ಗಡಿಯಾರ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿಸಿದರು.

ಧಾರವಾಡ ನಗರದಲ್ಲಿ ಜ.20ರಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾರನ್ನು ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಸಮಿತಿ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಅನ್ಸರ್‌ಸಾಬ್, ಅಧ್ಯಕ್ಷ ಹುಸೇನ್‌ಬಾಷಾ ಕೆ., ಮುಸ್ತಫಾ, ಅಮೀನ್, ಹಸನ್, ಆರಿಫ್, ವಸಿಂ, ಸಲೀಂ, ಅಬ್ದುಲ್ ರಜಾಕ್, ಲಾಲಾ ಸಾಬ್, ಹಜರತ್, ಖಯ್ಯುಮ್, ಯುನೂಸ್, ಬಾಬರ್, ಮಹಿಬೂಬ, ಅಬ್ದುಲ್ ವಹೀದ್ ಇಬ್ರಾಹಿಂ, ಅಬ್ಬಾಸ್, ಇರ್ಫಾನ್, ಹುಸೇನ್, ಅಯುಬ್, ವಸಿಂ ಪಾಷಾ, ದಾದಾಪೀರ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.