ADVERTISEMENT

ರಾಯಚೂರು: ಬಿಜೆಪಿ ಅಭ್ಯರ್ಥಿ ಪರವಾಗಿ ಏ. 17ರಂದು ಪವನ್‌ ಕಲ್ಯಾಣ್ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 15:56 IST
Last Updated 11 ಏಪ್ರಿಲ್ 2024, 15:56 IST
ಪವನ್‌ ಕಲ್ಯಾಣ್‌
ಪವನ್‌ ಕಲ್ಯಾಣ್‌   

ರಾಯಚೂರು: ಆಂಧ್ರಪ್ರದೇಶದ ಜನ ಸೇನಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ತೆಲುಗು ಚಲನಚಿತ್ರ ನಟ ಪವನ್‌ ಕಲ್ಯಾಣ್ ಏಪ್ರಿಲ್‌ 17ರಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ರೋಡ್‌ ಶೋ ನಡೆಸಲಿದ್ದಾರೆ.

ಅಂದು ಬೆಳಿಗ್ಗೆ 10.30ಕ್ಕೆ ಹೆಲಿಕಾಪ್ಟರ್‌ ಮೂಲಕ ಯರಮರಸ್‌ ಸರ್ಕ್ಯೂಟ್‌ ಹೌಸ್‌ ಬಳಿ ಇರುವ ಹೆಲಿಪ್ಯಾಡ್‌ಗೆ ಬರುವ ಅವರು ಬೆಳಿಗ್ಗೆ 11 ಗಂಟೆಯಿಂದ 12 ಗಂಟೆ ವರೆಗೆ ನಗರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

ಕನಕದಾಸ ವೃತ್ತದಿಂದ ಆರಂಭವಾಗುವ ಮೆರವಣಿಗೆ ಮಡಿವಾಳ ವೃತ್ತಕ್ಕೆ ಬಂದು ಸಮಾರೋಪಗೊಳ್ಳಲಿದೆ. ನಂತರ ಹೆಲಿಕಾಪ್ಟರ್‌ ಮೂಲಕ ಬಳ್ಳಾರಿಗೆ ತೆರಳಿದ್ದಾರೆ ಎಂದು ಬಿಜೆಪಿ ಮುಖಂಡ ಬಾಬುರಾವ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.