ADVERTISEMENT

ಮಗುಚಿದ ಕಂಕರ್‌ ಲಾರಿ: ಚಾಲಕ ಸಹಿತ ಭಸ್ಮ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 14:13 IST
Last Updated 15 ಜೂನ್ 2020, 14:13 IST

ರಾಯಚೂರು: ನಗರದ ಹೈದರಾಬಾದ್‌ ಬೈಪಾಸ್‌ ರಸ್ತೆಯಲ್ಲಿ ಕಂಕರ್‌ ತುಂಬಿದ್ದ ಲಾರಿಯೊಂದು ಮಗುಚಿ ಚಾಲಕ ಸಹಿತ ಸುಟ್ಟುಹೋಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಕುಷ್ಟಗಿಯ ಚಾಲಕ ಬಾಲಾಜಿ (25) ಸಜೀವ ದಹನವಾದರು.ಬಳ್ಳಾರಿ ಜಿಲ್ಲೆ ಮರಿಯಮ್ಮನಹಳ್ಳಿಯಿಂದ ತೆಲಂಗಾಣದ ಶಾದ್‌ನಗರಕ್ಕೆ ಜಲ್ಲಿಕಲ್ಲು ತುಂಬಿಕೊಂಡು ಹೋಗುತ್ತಿತ್ತು. ಲಾರಿ ಸಂಪೂರ್ಣ ಭಸ್ಮವಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT