ADVERTISEMENT

ಸಹಕಾರಿ ಸಂಘ: ಎಂ.ಲೋಕನಗೌಡ ಅಧ್ಯಕ್ಷ, ಎಂ.ಆರ್.ಪ್ರಾಣೇಶ್ ಉಪಾಧ್ಯಕ್ಷ

ಸಾಯಿ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 8:00 IST
Last Updated 13 ಜನವರಿ 2026, 8:00 IST
ಎಂ.ಲೋಕನಗೌಡ
ಎಂ.ಲೋಕನಗೌಡ   

ಸಿಂಧನೂರು: ನಗರದ ಶ್ರೀ ಸಾಯಿ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಎಂ.ಲೋಕನಗೌಡ, ಉಪಾಧ್ಯಕ್ಷರಾಗಿ ಎಂ.ಆರ್.ಪ್ರಾಣೇಶ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಿ.ಬಸವರಾಜ ತಿಳಿಸಿದ್ದಾರೆ.

ಸೋಮವಾರ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ನಿರ್ದೇಶಕರಾಗಿ ಸೂಗುರಯ್ಯಸ್ವಾಮಿ, ಕೆ.ಶರಣಬಸವ ವಕೀಲ, ಆರ್.ಪಂಪಾಪತಿ ಪಾಟೀಲ್, ಎಚ್.ಕಲ್ಯಾಣಪ್ಪ ರೌಡಕುಂದ, ಸರ್ವೋತ್ತಮರೆಡ್ಡಿ ಪಾಟೀಲ್, ರವಿ ಕೆ, ಮಣಿಮಾಲಾ, ರಂಗಮ್ಮ ಮತ್ತು ಸುನಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂ.ಆರ್.ಪ್ರಾಣೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT