ADVERTISEMENT

ಜನರು ದೇಣಿಗೆ ನೀಡುತ್ತಿರುವ ಬಗ್ಗೆ ಪ್ರತಾಪಗೌಡ ಭ್ರಮೆಯಲ್ಲಿದ್ದಾರೆ: ಬಸನಗೌಡ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 8:25 IST
Last Updated 29 ಮಾರ್ಚ್ 2021, 8:25 IST
   

ಮಸ್ಕಿ (ರಾಯಚೂರು): 'ಕ್ಷೇತ್ರದಲ್ಲಿ ಜನರು ತಾವು ಬೆವರು ಸುರಿಸಿ ದುಡಿದ ಹಣವನ್ನು ಬೆಂಬಲ ರೂಪದಲ್ಲಿ ದೇಣಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಪ್ರತಾಪಗೌಡ ಪಾಟೀಲ ಅವರು ಭ್ರಮೆಯಿಂದ ಹೇಳಿಕೆ ನೀಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು ಪ್ರತ್ಯುತ್ತರ ನೀಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದುಡ್ಡು ಪಡೆಯುವ ಜಾಯಮಾನ ನನ್ನದಲ್ಲ. ಆದರೆ ಪ್ರತಾಪಗೌಡ ಪಾಟೀಲ ಅವರಿಗೆ ದುಡ್ಡು ಪಡೆಯುವುದು ರೂಢಿ ಇದೆ. ಹಾಗಾಗಿ ಬೇರೆಯವರ ಬಗ್ಗೆ ಅನುಮಾನದಿಂದಮಾತನಾಡುತ್ತಾರೆ' ಎಂದರು.

'ಸೋಲಿನ ಹತಾಶೆಯಿಂದ ಪ್ರತಾಪಗೌಡ ಆ ರೀತಿ ಹೇಳುತ್ತಿದ್ದಾರೆ. ಒಂದು ವೇಳೆ ಅವರಿಗೆ ಈ ಬಗ್ಗೆ ಅನುಮಾನ ಇದ್ದರೆ, ಅವರು ಯಾವುದಾದರೂ ದೇವರು ಮುಂದೆ ಬರಲಿ, ನಾನು ಪ್ರಮಾಣ ಮಾಡುತ್ತೇನೆ' ಎಂದು ಸವಾಲು ಹಾಕಿದರು.

ADVERTISEMENT

ಬಸನಗೌಡ ತುರ್ವಿಹಾಳ ಅವರು ಗ್ರಾಮಗಳಿಗೆ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಜನರು ಅವರಿಗೆ ಹಣ ಕೊಟ್ಟು ಬೆಂಬಲಿಸುತ್ತಿರುವುದು ಸಾಮಾನ್ಯವಾಗಿದೆ.ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಜನರ ಕೈಗೆ ಮೊದಲೇ ಹಣ ಕೊಡುತ್ತಿದ್ದಾರೆ ವಿಚಾರ ಗೊತ್ತಾಗಿದೆ. ಅದನ್ನೇ ಜನರು ಬಸನಗೌಡರಿಗೆ ವಾಪಸ್ ಪಡೆದು ಗಿಮಿಕ್ ಮಾಡುತ್ತಿದ್ದಾರೆ ಎಂದು ಪ್ರತಾಪಗೌಡ ಪಾಟೀಲ ಅವರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.