ರಾಯಚೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈಲಿನಲ್ಲಿ ಸಹ ಪ್ರಯಾಣಿಕರೊಂದಿಗೆ ಕುಶಲೋಪರಿ ಮಾತನಾಡುವ ಚಿತ್ರ ವೈರಲ್ ಆಗಿದೆ.
ಮುಂಬೈನಿಂದ ಶುಕ್ರವಾರ ರಾತ್ರಿ ಕುರ್ಲಾ- ಕೊಯಿಮುತ್ತೂರ್ ರೈಲಿನಲ್ಲಿ ಸಂಚಾರ ಆರಂಭಿಸಿದ್ದ ಅವರು, ಶನಿವಾರ ಬೆಳಿಗ್ಗೆ 11 ಗಂಟೆಗೆ ರಾಯಚೂರು ತಲುಪಿದರು.
ರೈಲಿನ ಎಚ್ಎ- 1 ಕ್ಯಾಬಿನ್ ನಲ್ಲಿದ್ದ ಸಚಿವರು, ಎಸಿ ಬೋಗಿಗಳತ್ತ ಹೋಗಿ ಪ್ರಯಾಣಿಕರ ಕುಶಲೋಪರಿ ವಿಚಾರಿಸಿದ್ದಾರೆ.
ರಾಯಚೂರಿನಲ್ಲಿ ಆಯೋಜಿಸಿರುವ ಸಿರಿಧಾನ್ಯಗಳ ಅಭಿಯಾನದ ಉದ್ಘಾಟನೆ ಗಾಗಿ ಅವರು ಆಗಮಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.