ADVERTISEMENT

ರಾಯಚೂರು: ಮಗನನ್ನು ನೀರಲ್ಲಿ ಮುಳುಗಿಸಿ ತಾಯಿಯೂ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 12:54 IST
Last Updated 7 ಆಗಸ್ಟ್ 2020, 12:54 IST

ಮಾನ್ವಿ (ರಾಯಚೂರು ಜಿಲ್ಲೆ):ಐದು ತಿಂಗಳ ಪುತ್ರನನ್ನು ಬ್ಯಾರಲ್‌ ನೀರಿಗೆ ಹಾಕಿ ಜೀವತೆಗೆದು, ತಾಯಿಯೂ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ತಾಯಿ ಜಾನಕಿ (26), ರಾಘವೇಂದ್ರ (5ತಿಂಗಳು) ಮೃತರು. ಪತಿ ದುರುಗಪ್ಪ ಹಾಗೂ ಇನೊಬ್ಬ ಪುತ್ರಿ ಮನೆಯಲ್ಲಿ ಇರಲಿಲ್ಲ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT