ADVERTISEMENT

ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 12:03 IST
Last Updated 21 ಆಗಸ್ಟ್ 2019, 12:03 IST
ನಸೀಮಾ
ನಸೀಮಾ   

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಅತ್ತನೂರು ಗ್ರಾಮದ ಗಂಡನ ಮನೆಯಿಂದ ದೇವದುರ್ಗ ತಾಲ್ಲೂಕಿನ ದೇವತಗಲ್‌ನಲ್ಲಿರುವ ತವರು ಮನೆಗೆ ಹೋಗಿಬರುವುದಾಗಿ ಸೋಮವಾರ ತೆರಳಿದ್ದನಸೀಮಾ ಮಹಿಬೂಬ್ (38) ಅವರು, ಮಕ್ಕಳಾದ ಮಹ್ಮದ್ ಹನೀಫ್( 5), ಐಯಾನ್ (3) ರೀಗಾನ್ (1) ಅವರೊಂದಿಗೆ ಎನ್‌ಆರ್‌ಬಿಸಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ದೇವದುರ್ಗ ತಾಲ್ಲೂಕಿನ ಕೊತ್ತದೊಡ್ಡಿ ಬಳಿ ಮಂಗಳವಾರ ತಡರಾತ್ರಿ ಶವಗಳು ಪತ್ತೆಯಾಗಿವೆ. ಮೃತಳ ತಂದೆ ಹುಸೇನ್‌ ಭಾಷಾ ಅವರು ನೀಡಿದ್ದ ವರದಕ್ಷಿಣೆ ಕಿರುಕುಳ ದೂರು ಆಧರಿಸಿ ನಸೀಮಾಳ ಪತಿ ಮೆಹಬೂಬ್, ಮಾವ ಮೊಹ್ಮದ್‌, ಅತ್ತೆ ಹಮೀದಾ, ಮೈದಾನ ಮುಸ್ತಾಪ್‌ ಅವರನ್ನು ಸಿರವಾರ ಠಾಣೆ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT