ADVERTISEMENT

ದಸರಾ ನಿಮಿತ್ತ ವರುಣನ ಕೃಪೆಗಾಗಿ ಹೋಮ ಹವನ

ಬೋಸರಾಜು ಫೌಂಡೇಷನ್‌ ಕಾರ್ಯಕ್ರಮದಲ್ಲಿ ಸಂಸದ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ ಭಾಗಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 13:53 IST
Last Updated 19 ಅಕ್ಟೋಬರ್ 2018, 13:53 IST
ರಾಯಚೂರಿನಲ್ಲಿ ಶುಕ್ರವಾರ ದಸರಾ ನಿಮಿತ್ತ ವರುಣನ ಕೃಪೆಗಾಗಿ ಸಂಸದ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ, ರವಿಬೋಸರಾಜು ಹೋಮ ನಡೆಸಿದರು
ರಾಯಚೂರಿನಲ್ಲಿ ಶುಕ್ರವಾರ ದಸರಾ ನಿಮಿತ್ತ ವರುಣನ ಕೃಪೆಗಾಗಿ ಸಂಸದ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ, ರವಿಬೋಸರಾಜು ಹೋಮ ನಡೆಸಿದರು   

ರಾಯಚೂರು: ಜಿಲ್ಲೆ ಬರಗಾಲಕ್ಕೆ ತುತ್ತಾಗಿರುವುದರಿಂದ ವರುಣನ ಕೃಪೆಗಾಗಿ ಬೋಸರಾಜು ಫೌಂಡೇಷನ್ ನೇತೃತ್ವದಲ್ಲಿಶುಕ್ರವಾರ ಹೋಮ ಹವನ ಕಾರ್ಯಕ್ರಮ ನಡೆಯಿತು.

ನಗರದ ಗಾಂಧಿಚೌಕ್‌ನಲ್ಲಿರುವ ಹನುಮಾನ್ ಮಂದಿರದಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ ಹಾಗೂ ಮುಖಂಡ ರವಿ ಬೋಸರಾಜು ಅವರು ಹೋಮದಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ನಿಧಿಯಿಂದ ಅಂಗವಿಕಲರಿಗೆ 29 ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು.

ADVERTISEMENT

ಬರಗಾಲದಿಂದ ರೈತರು ಸಂಕಷ್ಟಕ್ಕೀಡಾಗಿರುವುದರಿಂದ ರಾವಣ ಸಂಹಾರ ಕಾರ್ಯಕ್ರಮ ಕೈಬಿಟ್ಟು, ಹೋಮ ಹವನ ನಡೆಸಿ ಸರಳವಾಗಿ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರಾದ ಪಾರಸಮಲ್ ಸುಖಾಣಿ, ಬಷೀರುದ್ದೀನ್, ಜಯವಂತರಾವ ಪತಂಗೆ, ಜಯಣ್ಣ, ಬಿ.ರಮೇಶ, ಶ್ರೀನಿವಾಸರೆಡ್ಡಿ, ಅಮರೇಗೌಡ ಹಂಚಿನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.