ADVERTISEMENT

ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ: ಬಸವರಾಜ ಭಜಂತ್ರಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 13:22 IST
Last Updated 19 ಆಗಸ್ಟ್ 2024, 13:22 IST
ಸಿರವಾರದಲ್ಲಿ ಸೋಮವಾರ ಅಖಿಲ ಕರ್ನಾಟಕ ಕೊರಮರ ಸಂಘದಿಂದ ಕಾಯಕಯೋಗಿ ಶಿವಶರಣ ನುಲಿಯಚಂದಯ್ಯ ಅವರ ಜಯಂತಿ ಆಚರಿಸಲಾಯಿತು
ಸಿರವಾರದಲ್ಲಿ ಸೋಮವಾರ ಅಖಿಲ ಕರ್ನಾಟಕ ಕೊರಮರ ಸಂಘದಿಂದ ಕಾಯಕಯೋಗಿ ಶಿವಶರಣ ನುಲಿಯಚಂದಯ್ಯ ಅವರ ಜಯಂತಿ ಆಚರಿಸಲಾಯಿತು   

ಸಿರವಾರ: ‘12ನೇ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠರಲ್ಲಿ ಒಬ್ಬರು ಶಿವಶರಣ ನುಲಿಯ ಚಂದಯ್ಯ ಅವರು’ ಎಂದು ಕೊರಮರ ಸಂಘದ ಮುಖಂಡ ಬಸವರಾಜ ಭಜಂತ್ರಿ ಹೇಳಿದರು.

ಪಟ್ಟಣದಲ್ಲಿ ಅಖಿಲ ಕರ್ನಾಟಕ ಕೊರಮರ ಸಂಘದಿಂದ ನುಲಿಯ ಚಂದಯ್ಯ ಜಯಂತಿ ಅಂಗವಾಗಿ ಸೋಮವಾರ ಪಿಡಬ್ಲ್ಯುಡಿ ಆಂಜನೇಯ ದೇವಸ್ಥಾನದ ಹತ್ತಿರ ಇರುವ ನುಲಿನ ಚಂದಯ್ಯ ಅವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು.

ಅಖಿಲ ಕರ್ನಾಟಕ ಕೊರಮರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ಜಿ.ಕೆ.ಭಜಂತ್ರಿ, ತಾಲ್ಲೂಕು ಘಟಕದ ಅಧ್ಯಕ್ಷ ಯಂಕಪ್ಪ ಭಜಂತ್ರಿ, ಹನುಮಂತ, ರಾಮು ಭಜಂತ್ರಿ, ಬಲ್ಲಟಗಿ ಯಂಕಪ್ಪ, ಕುರುಕುಂದ ಚನ್ನಪ್ಪ, ಅರಳಪ್ಪ ಯದ್ದಲದಿನ್ನಿ, ಹನುಮೇಶ, ಡಿ.ಯಮನೂರು, ದುರುಗಪ್ಪ, ಪಂಪಣ್ಣ ಚಾಗಭಾವಿ, ದುರ್ಗಪ್ಪ ಮಸ್ಕಿ, ಹುನಗುಂದ ರಾಮಣ್ಣ, ಮಾದೇವಪ್ಪ, ಸುಂಕಪ್ಪ, ಶಶಿಕುಮಾರ ಭಜಂತ್ರಿ, ಶಿವು ಭಜಂತ್ರಿ ಟೈಲರ್, ದಲಿತ ಮುಖಂಡ ಹರಳಪ್ಪ ಹೆದ್ದಲದಿನ್ನಿ, ಕಸಾಪ ಅಧ್ಯಕ್ಷ ಸುರೇಶ್ ಹೀರಾ, ಯಂಕಪ್ಪ ಗುಜ್ಜಾಲ್, ವೆಂಕಟೇಶ ದೊರೆ, ಚನ್ನಬಸವ ಗಡ್ಲ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.