ರಾಯಚೂರು: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ನಿಯಮಿತ (ಹಾಪಕಾಮ್ಸ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ದೇವದುರ್ಗ ತಾಲ್ಲೂಕು ಕೋಳೂರಿನ ನಾಗನಗೌಡ ಅಧ್ಯಕ್ಷರಾಗಿ ಮತ್ತು ರಾಯಚೂರು ತಾಲ್ಲೂಕಿನ ಬುರ್ದಿಪಾಡ ಗ್ರಾಮದ ಕೆ.ಪ್ರತಾಪರೆಡ್ಡಿಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಸೆಪ್ಟೆಂಬರ್ 28 ರಂದು ನಡೆದಿದ್ದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ 12 ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು.
ನಿರ್ದೇಶಕರ ವಿವರ: ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ಗ್ರಾಮದ ಲಿಂಗನಗೌಡ, ದೇವದುರ್ಗ ತಾಲ್ಲೂಕಿನ ಆಲ್ಕೋಡದ ವಿಶ್ವನಾಥರೆಡ್ಡಿ, ರಾಯಚೂರಿನ ಪಂಪನಗೌಡ, ಶಶಿರಾಜ, ಶಂಕರರೆಡ್ಡಿ, ಯಕ್ಲಾಸಪುರದ ಸೂರ್ಯಪ್ರಕಾಶ, ರಾಯಚೂರು ತಾಲ್ಲೂಕು ಚಂದ್ರಬಂಡಾದ ಲಚ್ಚಪ್ಪನಾಯಕ, ಕಲವಲದೊಡ್ಡಿ ಗ್ರಾಮದ ಹನ್ಮಂತ, ಯರಮರಸ್ ಕ್ಯಾಂಪಿನ ನಾಗೇಂದ್ರಮ್ಮ ಗೋಪಾಲರೆಡ್ಡಿ, ರಾಯಚೂರಿನ ಕಲ್ಪನಾ ನಾಗೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.