ADVERTISEMENT

ರಾಯಚೂರು ಗ್ರಾಪಂ ಚುನಾವಣೆ: ಫಲಿತಾಂಶ ಪ್ರಕಟ

ಮಸ್ಕಿ ತಾಲ್ಲೂಕಿನ 4 ಗ್ರಾಪಂ 77 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 14:06 IST
Last Updated 31 ಡಿಸೆಂಬರ್ 2020, 14:06 IST
ರಾಯಚೂರಿನ ಎಸ್‌ಆರ್‌ಪಿಯು ಕಾಲೇಜಿನ ಮತ ಎಣಿಕೆ ಕೇಂದ್ರದೊಳಗೆ ಬುಧವಾರ ಕಂಡುಬಂದ ದೃಶ್ಯ
ರಾಯಚೂರಿನ ಎಸ್‌ಆರ್‌ಪಿಯು ಕಾಲೇಜಿನ ಮತ ಎಣಿಕೆ ಕೇಂದ್ರದೊಳಗೆ ಬುಧವಾರ ಕಂಡುಬಂದ ದೃಶ್ಯ   

ರಾಯಚೂರು: ಜಿಲ್ಲೆಯ ಏಳು ತಾಲ್ಲೂಕುಗಳ 168 ಗ್ರಾಮ ಪಂಚಾಯಿತಿಗಳ 3300 ಸ್ಥಾನಗಳ ಪೈಕಿ 2881 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತಗಳ‌ ಎಣಿಕೆ ಪ್ರಕ್ರಿಯೆಯು ಬುಧವಾರ ಮಧ್ಯರಾತ್ರಿ 1.45 ಕ್ಕೆ ಮುಕ್ತಾಯವಾಗಿದೆ.

ರಾಯಚೂರು ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ 654 ಸ್ಥಾನಗಳಲ್ಲಿ 94 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 560 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮಾನ್ವಿ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳ 341 ಸ್ಥಾನಗಳಲ್ಲಿ 30 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 311 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಸಿರವಾರ ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳ 277 ಸ್ಥಾನಗಳಲ್ಲಿ 22 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 255 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ದೇವದುರ್ಗ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ 544 ಸ್ಥಾನಗಳಲ್ಲಿ 58 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 486 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ADVERTISEMENT

ಲಿಂಗಸುಗೂರು ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ 531 ಸ್ಥಾನಗಳಲ್ಲಿ 75 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 456 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.ಸಿಂಧನೂರು ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳ 626 ಸ್ಥಾನಗಳಲ್ಲಿ 89 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 537 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಮಸ್ಕಿ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳ 404 ಸ್ಥಾನಗಳಲ್ಲಿ 51 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರೆ, 276 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ತಡರಾತ್ರಿವರೆಗೂ ಮತಗಳ ಎಣಿಕೆ: ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಆರಂಭವಾಗಿ, ಮಧ್ಯರಾತ್ರಿ ಮುಕ್ತಾಯವಾಯಿತು.
ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಅವಿಶ್ರಾಂತವಾಗಿ ಮತಗಳ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಏಳು ತಾಲ್ಲೂಕುಗಳ ಪೈಕಿ ಆರು ಕಡೆಗಳಲ್ಲಿಯೂ ತಡರಾತ್ರಿವರೆಗೂ ಮತಗಳ ಎಣಿಕೆ ನಡೆಯಿತು. ಒಟ್ಟು 461 ಮೇಜುಗಳಲ್ಲಿ 1383 ಮತ ಎಣಿಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಹೆಚ್ಚುವರಿಯಾಗಿ 114 ಮತಎಣಿಕೆ ಸಿಬ್ಬಂದಿ ಇದ್ದರು. ಜಿಲ್ಲೆಯಲ್ಲೇ ಅತಿಹೆಚ್ಚು 33 ಗ್ರಾಮ ಪಂಚಾಯಿತಿಗಳಿರುವ ರಾಯಚೂರು ತಾಲ್ಲೂಕಿನಲ್ಲಿ 306 ಮತ ಎಣಿಕೆ ಸಿಬ್ಬಂದಿ ಕಾರ್ಯನಿರ್ವಹಿಸಿದರು. 24 ಸಿಬ್ಬಂದಿ ಹೆಚ್ಚುವರಿಯಾಗಿದ್ದರು. ಮತಗಳ ಎಣಿಕೆ ಕಾರ್ಯದ ಹೊರತಾದ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 1,163 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಎಲ್ಲಿಯೂ ಗೊಂದಲಕ್ಕೆ ಎಡೆಮಾಡದೆ ಚುನಾವಣಾ ಫಲಿತಾಂಶ ಪ್ರಕಟಿಸಲಾಯಿತು. ಕೆಲವು ಕಡೆಗಳಲ್ಲಿ ಸಮಪ್ರಮಾಣದ ಮತಗಳನ್ನು ಅಭ್ಯರ್ಥಿಗಳು ಪಡೆದಿದ್ದರು. ಅಂಥ ಕಡೆಗಳಲ್ಲಿ ಲಾಟರಿ ಮೂಲಕ ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.