ADVERTISEMENT

ರಾಯಚೂರು: ಮಣ್ಣಿನ ಸುಗಂಧ ಹರಡಿದ ಅಲ್ಪ ಮಳೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 9:51 IST
Last Updated 7 ಏಪ್ರಿಲ್ 2020, 9:51 IST
   

ರಾಯಚೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಕೂಡಾ ಅಕಾಲಿಕವಾಗಿ ಸುರಿದ ಅಲ್ಪಕಾಲದ ಮಳೆಯಿಂದಾಗಿ ಭತ್ತ ಬೆಳೆದಿರುವ ರೈತರು ಆತಂಕಕ್ಕೊಳಗಾದರು. ಇನ್ನೊಂದೆಡೆ, ಮಳೆಯಿಂದಾಗಿ ಮಣ್ಣಿನ ಸುಗಂಧವು ತಂಗಾಳಿಯಲ್ಲಿ ತೇಲಿ ಬರುತ್ತಿರುವುದು ಬೇಸಿಗೆಯಲ್ಲಿ ಮುದ ನೀಡುತ್ತಿದೆ.

ಕವಿತಾಳ ಹೋಬಳಿ ಹಾಗೂ ಮಸ್ಕಿ ಹೋಬಳಿ ಸುತ್ತಮುತ್ತಲೂ 15 ನಿಮಿಷ ಬಿರುಸಾಗಿ ಮಳೆ ಸುರಿದಿದೆ. ರಸ್ತೆ ಅಕ್ಕಪಕ್ಕದ ತಗ್ಗು ಗುಂಡಿಗಳಲ್ಲಿ ನೀರು ತುಂಬಿದೆ. ಬಡಾವಣೆಯ ಸಿಸಿ ರಸ್ತೆಗಳಲ್ಲಿ ನೀರು ಹರದಾಡುತ್ತಿದೆ. ನೀರಿಲ್ಲದೆ ಒಣಗುವ ಸ್ಥಿತಿಯಲ್ಲಿದ್ದ ಮರಗಳಲ್ಲಿ ಜೀವಕಳೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT