ADVERTISEMENT

ಡಾ. ಚನ್ನಬಸಯ್ಯಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 6:07 IST
Last Updated 28 ಫೆಬ್ರುವರಿ 2021, 6:07 IST
ಡಾ.ಚನ್ನಬಸಯ್ಯಹಿರೇಮಠ
ಡಾ.ಚನ್ನಬಸಯ್ಯಹಿರೇಮಠ   

ಮಸ್ಕಿ: ಪಟ್ಟಣದ ನಿವಾಸಿ, ಸಂಶೋಧಕ ಡಾ.ಚನ್ನಬಸಯ್ಯ ಹಿರೇಮಠ ಅವರಿಗೆ 2019ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಪ್ರಸಕ್ತ ರಾಯಚೂರಿನ ತಾರನಾಥ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಅವರ ಸಂಶೋಧನಾ ಗ್ರಂಥ ‘ಅನಾವರಣ’ ಕ್ಕೆ ಈ ಪ್ರಶಸ್ತಿ ದೊರಕಿದೆ.

ಪ್ರಶಸ್ತಿಯು ₹25 ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಡಾ.ಚನ್ನಬಸಯ್ಯ ಹಿರೇಮಠ ಅವರು ಇದುವರೆಗೆ 10 ಸಂಶೋಧನಾ ಗ್ರಂಥಗಳು, 14 ಸಂಪಾದಿತ ಕೃತಿಗಳು ಹಾಗೂ ಎರಡು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.

ADVERTISEMENT

‘ಪ್ರಶಸ್ತಿ ದೊರತಿರುವುದು ಸಂತಸ ತಂದಿದೆ. ಮತ್ತಷ್ಟು ಕೆಲಸ ಮಾಡಲು ಶಕ್ತಿ ನೀಡಿದೆ’ ಎಂದು ಪ್ರಶಸ್ತಿ ಪುರಸ್ಕೃತ ಡಾ.ಚನ್ನಬಸಯ್ಯ ಹಿರೇಮಠ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.