
ಸಿಂಧನೂರು: ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಎಸ್ಡಿಎಂಸಿ ಭದ್ರಬುನಾದಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಅಭಿಪ್ರಾಯಪಟ್ಟರು.
ನಗರದ ಸುಕಾಲಪೇಟೆ ಪಿಎಂಶ್ರೀ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಡಿದರು.
ಜಿ.ಬಸಯ್ಯಸ್ವಾಮಿ ಹಿರೇಮಠ ಗುಂಜಳ್ಳಿ ಸಾನ್ನಿಧ್ಯ ವಹಿಸಿದ್ದರು. ಯುವ ಮುಖಂಡ ಸುರೇಶ ಹಚ್ಚೊಳ್ಳಿ 2024-25ನೇ ಸಾಲಿನ ಸಂಚಿಕೆ ಬಿಡುಗಡೆಗೊಳಿಸಿದರು. ಮಾದರ ಮಹಾಸಭಾ ಅಧ್ಯಕ್ಷ ವೆಂಕಟೇಶ ಗಿರಿಜಾಲಿ ಮಹನೀಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಎಸ್ಡಿಎಂಸಿ ಅಧ್ಯಕ್ಷ ಹೊನ್ನೂರು ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನೇತ್ರಾವತಿ ಬಸವರಾಜ ವಿಶ್ವಕರ್ಮ, ಮಾಜಿ ಯೋಧ ವೀರೇಶ ಯಾದವ್, ಶಿಕ್ಷಣ ಸಂಯೋಜಕ ಅಮರೇಶ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ, ಅಜೀಮ್ ಪ್ರೇಮ್ಜೀ ಫೌಂಡೇಶನ್ನ ಭಾರತಿ, ಮುಖ್ಯಶಿಕ್ಷಕ ಜಿ.ಗುರುಬಸಯ್ಯ ಹಿರೇಮಠ, ಕನಕನಗರ ಮುಖ್ಯಶಿಕ್ಷಕ ಮಲ್ಲಪ್ಪ, ಸಿಆರ್ಪಿ ಹನುಮಂತಪ್ಪ, ಯುವ ಮುಖಂಡ ರಾಮು ಯಾದವ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಅಂಬಮ್ಮ, ಸಾವಿತ್ರಿಬಾಯಿ ಫುಲೆ ಸಂಘದ ಕೋಶಾಧ್ಯಕ್ಷೆ ರೇಣುಕಾ ಗೌಡರ್, ಶಿಕ್ಷಕರಾದ ಅಂಭೋಜಿ ಪವರ್, ವೆಂಕನಗೌಡ ಉಪಸ್ಥಿತರಿದ್ದರು. ಸುಧಾ ಎನ್.ಹುಳ್ಳಿ ನಿರೂಪಿಸಿದರು. ಮುದುಕಮ್ಮ ಪ್ರಾರ್ಥಿಸಿದರು. ಹುಲಿಗೆಮ್ಮ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.