ADVERTISEMENT

ಮೂರು ದಿನಗಳ ಬಳಿಕ ಬಿಸಿಲು

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 12:56 IST
Last Updated 8 ಜನವರಿ 2021, 12:56 IST
ರಾಯಚೂರಿನಲ್ಲಿ ಮೂರು ದಿನಗಳಿಂದ ಮೋಡಗಳಿಂದ ಮರೆಯಾಗಿದ್ದ ಸೂರ್ಯನು ಶುಕ್ರವಾರ ಮಧ್ಯಾಹ್ನ ಗೋಚರಿಸಿದ
ರಾಯಚೂರಿನಲ್ಲಿ ಮೂರು ದಿನಗಳಿಂದ ಮೋಡಗಳಿಂದ ಮರೆಯಾಗಿದ್ದ ಸೂರ್ಯನು ಶುಕ್ರವಾರ ಮಧ್ಯಾಹ್ನ ಗೋಚರಿಸಿದ   

ರಾಯಚೂರು: ಜಿಲ್ಲೆಯಲ್ಲಿ ಮೂರು ದಿನಗಳ ಬಳಿಕ ಶುಕ್ರವಾರ ಮಧ್ಯಾಹ್ನ ಸೂರ್ಯನು ಪ್ರಕಾಶಮಾನವಾಗಿ ಗೋಚರಿಸಿದ್ದರಿಂದ ಕೆಲಕಾಲ ಬಿಸಿಲು ಹರಡಿಕೊಂಡಿತು.

ಬಂಗಳಕೊಲ್ಲಿಯಲ್ಲಿ ಸುಳಿಗಾಳಿ ಬೀಸುತ್ತಿರುವುದರಿಂದ ಹಾಗೂ ಉತ್ತರ ಭಾರತದ ಹಿಮಾಲಯದಿಂದ ಶೀತಗಾಳಿ ಬೀಸುತ್ತಿರುವುದರಿಂದ ಜಿಲ್ಲೆಯಲ್ಲಿ ಬಿಸಿಲು ಇಲ್ಲದೆ ಮಬ್ಬು ಆವರಿಸಿಕೊಂಡಿತ್ತು. ಬುಧವಾರ ಬೆಳಿಗ್ಗೆಯಿಂದ ಎರಡು ದಿನ ಸುರಿದ ತುಂತುರು ಮಳೆಯು ರೈತರಲ್ಲಿ ಆತಂಕವನ್ನು ತುಂಬಿತ್ತು.

ಶುಕ್ರವಾರ ಮಳೆ ಸುರಿಯದಿದ್ದರೂ ಮೋಡ ಕವಿದ ಮಬ್ಬು ವಾತಾವರಣ ಮುಂದುವರಿದಿತ್ತು. ಮಧ್ಯಾಹ್ನದ ಬಳಿಕ ಬಿಸಿಲು ಕಾಣಿಸಿದ್ದರಿಂದ ಜನರು ಸ್ವಲ್ಪ ನಿರಾಳತೆ ಅನುಭವಿಸಿದರು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ, ಭತ್ತದ ಕೊಯ್ಲು ಜಿಲ್ಲೆಯಲ್ಲಿ ಭರದಿಂದ ಮುಂದುವರಿದಿತ್ತು. ಮೂರು ದಿನಗಳ ಹಿಂದೆ ದಿಢೀರ್‌ ಆವರಿಸಿದ ತಂಪಿನಿಂದಾಗಿ ಕೊಯ್ಲು ಮಾಡುವುದಕ್ಕೆ ಅಡಚಣೆ ಆಗಿದೆ.

ADVERTISEMENT

ಮೆಣಸಿನಕಾಯಿ, ಭತ್ತ ಹಾಗೂ ಇತರೆ ಫಸಲು ಚೆನ್ನಾಗಿ ಒಣಗುವುದಕ್ಕೆ ಬಿಸಿಲು ಬೇಕೆಬೇಕು. ಕೊಯ್ಲು ತಡವಾದರೆ ನಷ್ಟವಾಗುವ ಆತಂಕದಲ್ಲಿ ರೈತರಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಶನಿವಾರದಿಂದ ವಾತಾವರಣ ಸಹಜ ಸ್ಥಿತಿಗೆ ಮರಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.