ADVERTISEMENT

ರಾಯಚೂರು ಸಿಂಡಿಕೇಟ್‌ ಬ್ಯಾಂಕ್‌: ಗೃಹಸಾಲ ಮೇಳ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 16:02 IST
Last Updated 23 ಜನವರಿ 2020, 16:02 IST

ರಾಯಚೂರು:ನಗರದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯಿಂದ ಜನವರಿ 24 ರಂದು ಸಂಜೆ 6 ಗಂಟೆಗೆ ಸ್ಟೇಷನ್‌ ರಸ್ತೆ ಪಕ್ಕದ ಎಸ್‌ಎಲ್‌ವಿ ಹೋಟೆಲ್‌ ಸಭಾಂಗಣದಲ್ಲಿ ಗೃಹ ಸಾಲಮೇಳ ಆಯೋಜಿಸಲಾಗಿದೆ.

‘ಸಿಂಡ್‌ ನಿವಾಸ್‌’ ಯೋಜನೆಯಡಿ ಜಾಮೀನು ರಹಿತವಾಗಿ ಅತಿಕಡಿಮೆ ಪ್ರೊಸೆಸಿಂಗ್‌ನಲ್ಲಿ, ಅವಧಿಪೂರ್ವ ಪಾವತಿಗೆ ದಂಡವಿಲ್ಲದದಂತೆ, ಆಕರ್ಷಕ ಬಡ್ಡಿದರದೊಂದಿಗೆ ಗೃಹ ಸಾಲಕ್ಕೆ ಮಂಜೂರಾತಿ ನೀಡಲಾಗುವುದು. ಪ್ರವೇಶ ಉಚಿತವಾಗಿದ್ದು, ಕನಸಿನ ಮನೆ ನಿರ್ಮಿಸಿಕೊಳ್ಳುವವರಿಗೆ ಇದೊಂದು ಸದಾವಕಾಶವಾಗಿದೆ.

30 ವರ್ಷಗಳ ದೀರ್ಘಾವಧಿ ಮರುಪಾವತಿ, ರಿಯಾಯ್ತಿ, ಟಾಪ್‌ ಆಪ್‌ ಸೌಲಭ್ಯಗಳು ಇವೆ. ಬ್ಯಾಂಕ್‌ ಮಂಜೂರಿಗೊಳಿಸುವ ಗೃಹಸಾಲವು ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ ಒಳಪಟ್ಟಿದೆ. ಅರ್ಹ ಗ್ರಾಹಕರಿಗೆ ₹2.67 ಲಕ್ಷದವರೆಗೂ ಬಡ್ಡಿಯಲ್ಲಿ ಸಹಾಯಧನ ದೊರೆಯಲಿದೆ. ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಬ್ಯಾಂಕ್‌ ಮುಖ್ಯ ಪ್ರಬಂಧಕ ನೇತಾಜಿ ಗೌಡರ, ಶಾಖಾ ಪ್ರಬಂಧಕ ಚನ್ನಬಸಪ್ಪ, ಕೌಶಿಕರೆಡ್ಡಿ, ನಾರಾಯಣ ಅವರು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.