ಸಿರವಾರ: ಸಿರವಾರ-ರಾಯಚೂರು ಮುಖ್ಯರಸ್ತೆ ತಿಪ್ಪಲದಿನ್ನಿ ಕ್ರಾಸ್ ಬಳಿ ಗುರುವಾರ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
‘ಹಟ್ಟಿ ಗ್ರಾಮದ ನಿವಾಸಿ ವೆಂಕೋಬ ಸಾಗರ್ (56), ಕವಿತಾಳ ಸಮೀಪದ ಮಲ್ಲದಗುಡ್ಡ ಕ್ಯಾಂಪ್ನ ದಂಪತಿ ವಿರೂಪಾಕ್ಷಿ (40) ಮತ್ತು ಅಕ್ಕಮಹಾದೇವಿ (36) ಮೃತರು. ವೆಂಕೋಬ ಸಾಗರ್ ರಾಯಚೂರಿನಿಂದ ಹಟ್ಟಿಗೆ ಮತ್ತು ವಿರೂಪಾಕ್ಷಿ ದಂಪತಿ ಮಲ್ಲದಗುಡ್ಡ ಕ್ಯಾಂಪ್ನಿಂದ ರಾಯಚೂರಿಗೆ ಬೈಕ್ನಲ್ಲಿ ಹೊರಟಿದ್ದರು’ ಎಂದು ಸಿರವಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.