ADVERTISEMENT

ರಾಯಚೂರು: ಅಕ್ಕಿ ಮೂಟೆ ಉರುಳಿ ಇಬ್ಬರು‌ ಕಾರ್ಮಿಕರು ಸಾವು

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 6:47 IST
Last Updated 27 ಜೂನ್ 2022, 6:47 IST
   

ರಾಯಚೂರು: ರಾಶಿಹಾಕಿದ್ದ ಅಕ್ಕಿಮೂಟೆಗಳು ಉರುಳಿದ್ದರಿಂದ ಅದರಡಿಗೆ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಗರದ ಮನ್ಸಲಾಪುರ ಮಾರ್ಗದ ಮದರ್ ಡೈರಿ ರೈಸ್ ಮಿಲ್‌ನಲ್ಲಿ ಸೋಮವಾರ ನಡೆದಿದೆ.‌

ಬಿಹಾರ ರಾಜ್ಯದ ಉಪೇಂದ್ರ (40) ಮತ್ತು ನಿತೀಶ್ (25)ಮೃತರಾದವರು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT