ADVERTISEMENT

‘ಎಲ್ಲ ಕ್ಷೇತ್ರಗಳಲ್ಲಿ ಬಿಎಸ್ ಪಿ ಸ್ಪರ್ಧೆ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 9:04 IST
Last Updated 25 ನವೆಂಬರ್ 2017, 9:04 IST

ಕನಕಪುರ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಬಿ.ಎಸ್‌.ಪಿ.ಸ್ಪರ್ಧೆ ನಡೆಸಿ 10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಪಕ್ಷದ ಶಾಸಕರನ್ನು ವಿಧಾನಸಭೆ ಕಳಿಸಲಿದೆ ಎಂದು ರಾಮನಗರ ಜಿಲ್ಲಾ ಸಂಯೋಜಕ ನೀಲಿ ರಮೇಶ್‌
ಹೇಳಿದರು.

ನವೆಂಬರ್‌ 26ರಂದು ಬೆಂಗಳೂರು ನಗರಕ್ಕೆ ಬಿ.ಎಸ್‌.ಪಿ.ರಾಷ್ಟ್ರೀಯ ನಾಯಕಿ ಮಾಯಾವತಿ ಭೇಟಿ  ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದರು.

ಮಾಯಾವತಿ ಅವರು 2018ರಲ್ಲಿ ನಡೆಯುವ ಕರ್ನಾಟಕದ ಸಾರ್ವತ್ರಿಕ ಚುನಾವಣೆಯನ್ನು ಗುರಿಯಾಗಿಸಿ ಕೊಂಡು ಬೆಂಗಳೂರಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿ ಮೂರು ಪಕ್ಷಗಳಿಂದ ಬೇಸತ್ತಿರುವ ರಾಜ್ಯದ ಜನತೆಗೆ ಬಿ.ಎಸ್‌.ಪಿ .ಯನ್ನು ಬೆಂಬಲಿಸಲಿದ್ದಾರೆ. ಮೂರು ಪಕ್ಷಗಳಿಂದ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವ ನಾಯ ಕರಿಗೆ ಪಕ್ಷ ಚುನಾವಣೆಯಲ್ಲಿ ಅವಕಾಶ ಕಲ್ಪಿಸಲಿದೆ ಎಂದರು.

ADVERTISEMENT

ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್‌ ಮಾತನಾಡಿ ಪಕ್ಷ  ಎಲ್ಲಾ ವರ್ಗದ, ಜನಾಂಗದವರಿಗೂ ಸಮಾನ ಅವಕಾಶ ಕಲ್ಪಿಸಲಿದೆ. ಮಹಿಳೆಯರಿಗೆ, ದುರ್ಬಲರಿಗೂ ಪಕ್ಷದಲ್ಲಿ ಸಮಾನ ಅವಕಾಶವಿದ್ದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಮಬಲ ಹೋರಾಟ ನಡೆಸಲಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಕ್ಷದ ರಾ್ಯಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕೆಂದು ಮನವಿ ಮಾಡಿದರು.

ಬಿ.ಎಸ್‌.ಪಿ. ತಾಲ್ಲೂಕು ಅಧ್ಯಕ್ಷ ನೆರಳಳ್ಳಿ ಕೃಷ್ಣಪ್ಪ, ಸಾತನೂರು ಶಿವಮಾದು, ಹರಿಹರ ನಿಂಗರಾಜು, ಬಸವಮಾದಮ್ಮ, ಮಳೆಕೋಟೆ ಕೃಷ್ಣಪ್ಪ, ಮೇಡನಹಳ್ಳಿದೊಡ್ಡಿ ಮುನಿ ಮಾದಯ್ಯ, ಅಜ್ಜೇಗೌಡನವಲಸೆ ಅಶ್ವಥ್‌, ಬಸವರಾಜು, ನಲ್ಲಹಳ್ಳಿ ಮುನಿರಾಜು, ಮರಿಸ್ವಾಮಿ, ದೊಡ್ಡಕಬ್ಬಳ್ಳಿ ಚಂದ್ರಕುಮಾರ್‌, ಮೆಳಕೋಟೆ ಶಿವಣ್ಣ, ಪರಮೇಶ್‌,
ಕೆಂಪಯ್ಯ, ಶಿವಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.