ADVERTISEMENT

42 ಲೀಟರ್ ಅಕ್ರಮ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 15:07 IST
Last Updated 31 ಮಾರ್ಚ್ 2020, 15:07 IST

ಚನ್ನಪಟ್ಟಣ: ತಾಲ್ಲೂಕಿನ ವಿವಿಧೆಡೆ ಸೋಮವಾರ ದಾಳಿ ನಡೆಸಿದ ಅಕ್ಕೂರು ಪೊಲೀಸರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 42ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡು ಐದು ಮಂದಿಯನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಸೋಗಾಲ, ಎ.ವಿ.ಹಳ್ಳಿ, ಉಜ್ಜನಹಳ್ಳಿ, ಅರಳಾಳುಸಂದ್ರ. ವೈ.ಟಿ.ಹಳ್ಳಿ, ಎಸ್.ಎಂ.ಹಳ್ಳಿಯಲ್ಲಿ ದಾಳಿ ನಡೆಸಲಾಗಿದೆ. ಈ ಸಂಬಂಧ ಸೋಗಾಲ ಗ್ರಾಮದ ಪ್ರದೀಪ್, ಎ.ವಿ.ಹಳ್ಳಿಯ ಶಂಕರ್, ಉಜ್ಜನಹಳ್ಳಿ ಕೃಷ್ಣೇಗೌಡ, ಎಸ್.ಎಂ.ಹಳ್ಳಿಯ ನಾಗರಾಜು, ಅರಳಾಳುಸಂದ್ರದ ಗಂಗಾಧರ ಅವರನ್ನು ಬಂಧಿಸಲಾಗಿದೆ.

ಸಬ್ ಇನ್‌ಸ್ಪೆಕ್ಟರ್ ಭಾಸ್ಕರ್, ಸಿಬ್ಬಂದಿ ಪರಮಶಿವಯ್ಯ, ಹೊಂಬಾಳ ಶೇಖರ್, ಅಯ್ಯನಗೌಡ ನರಸಿಂಹಮೂರ್ತಿ, ಜ್ಞಾನೇಂದ್ರ ನವೀನ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡಿರುವ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.