ಮಾಗಡಿ: ಪದ್ಮ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಪೊಲೀಸರು ಪ್ರಜ್ವಲ್ ಬಿನ್ ಚಿಕ್ಕಣ್ಣ ಎಂಬ ಗುಬ್ಬಿ ತಾಲ್ಲೂಕು ಮಾವಿನಹಳ್ಳಿ ನಿವಾಸಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 90ಗ್ರಾಂ ಚಿನ್ನ ಹಾಗೂ ₹40 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಪಿಎಸ್ಐ ಟಿ.ವೆಂಕಟೇಶ್ ಪ್ರಕರಣ ದಾಖಲಿಸಿಕೊಂಡು ಎಸ್ಪಿ ಅನೂಪ್.ಎ ಶೆಟ್ಟಿ, ಡಿವೈಎಸ್ಪಿ, ಓಂಪ್ರಕಾಶ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಮಂಜುನಾಥ ನೇತೃತ್ವದಲ್ಲಿ ಹೆಡ್ ಕಾನ್ ಸ್ಟೆಬಲ್ ಕಾಂತರಾಜು, ಕಾನ್ ಸ್ಟೆಬಲ್ಗಳಾದ ರಾಜಣ್ಣ, ಬೀರಪ್ಪ, ಮಂಜುನಾಥ್ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.