ADVERTISEMENT

ಟ್ರಾಕ್ಟರ್‌ ಡಿಕ್ಕಿ: ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 7:33 IST
Last Updated 19 ಏಪ್ರಿಲ್ 2024, 7:33 IST

ಕನಕಪುರ: ಮಣ್ಣು ತುಂಬಿದ ಟ್ರ್ಯಾಕ್ಟರ್‌ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನಪ್ಪಿರುವುದು ಹೂಕುಂದ ಸಮೀಪದ ಶ್ರೀರಾಮ ಸಾಗರದಲ್ಲಿ ಗುರುವಾರ ನಡೆದಿದೆ.

ತಮಿಳುನಾಡು ಅಂಚಟ್ಟಿ ಮೂಲದ ಮಾದೇಶ್‌ (35) ಮೃತರು. ಬುಧವಾರ ಬೆಳಿಗ್ಗೆ  ಬೈಕ್‌ನಲ್ಲಿ ಕೋಡಿಹಳ್ಳಿ ದೊಡ್ಡಾಲಹಳ್ಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದಿದೆ.

ಚಾಲಕ ಮತ್ತು ಟ್ರ್ಯಾಕ್ಟರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.