ADVERTISEMENT

ಡೇರಿಗೆ ವಿಶೇಷಾಧಿಕಾರಿ ನೇಮಕ: ವೈ. ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 3:39 IST
Last Updated 19 ಏಪ್ರಿಲ್ 2021, 3:39 IST

ರಾಮನಗರ: ತಾಲ್ಲೂಕಿನ ಹುಣಸೇದೊಡ್ಡಿ ಹಾಲು ಉತ್ಪಾದಕರ ಸಂಘಕ್ಕೆ ವಿಶೇಷಾಧಿಕಾರಿ ನೇಮಕ ಮಾಡಿ ಸಹಕಾರ ಸಂಘಗಳ ನಿಬಂಧಕ ವೈ. ವೆಂಕಟೇಶ್‌ ಆದೇಶ ಹೊರಡಿಸಿದ್ದಾರೆ.

ಸಂಘದ ಐದು ನಿರ್ದೇಶಕರು ಈಚೆಗೆ ರಾಜೀನಾಮೆ ನೀಡಿದ್ದು, ಅವರಲ್ಲಿ ಇಬ್ಬರು ಮಾತ್ರ ನಾಮಪತ್ರ ಹಿಂಪಡೆದಿದ್ದಾರೆ. ಈ ನಡುವೆ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಮುತ್ತುರಾಜು ಅವರ ತಂದೆ ವೀರಭದ್ರಯ್ಯ ಅವರು ಸಂಘದ ನಿರ್ದೇಶಕರಾಗಿದ್ದಾರೆ. ಅವರ ಆಯ್ಕೆಯು ಕಾನೂನಿಗೆ ವಿರುದ್ಧವಾಗಿದ್ದು, ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಡೇರಿಯಲ್ಲಿ ಕೋರಂ ಕೊರತೆ ಎದುರಾಗಲಿದೆ.

ಹೀಗಾಗಿ ಸಹಕಾರ ಸಂಘದ ಅಧಿನಿಯಮದಂತೆ ಕಚೇರಿಯ ದ್ವಿತೀಯದರ್ಜೆ ಸಹಾಯಕ ವಿ. ಶಿನಾನಂದ ರೆಡ್ಡಿ ಅವರನ್ನು ಹುಣಸೇದೊಡ್ಡಿ ಡೇರಿಗೆ ವಿಶೇಷಾಧಿಕಾರಿಯಾಗಿ ನೇಮಕ ಮಾಡಿದ್ದು, ಅಧಿಕಾರ ವಹಿಸಿಕೊಂಡು ಸಂಘದ ಆಡಳಿತ ಮಂಡಳಿ ಪುನರ್ ರಚನೆಗೆ ಅಗತ್ಯ ಪ್ರಸ್ತಾವ ಸಲ್ಲಿಸಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.