ADVERTISEMENT

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಮೂವರು ಮಹಿಳೆಯರ ವಿಚಾರಣೆ?

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 21:15 IST
Last Updated 28 ಅಕ್ಟೋಬರ್ 2022, 21:15 IST
   

ರಾಮನಗರ: ಕಂಚುಗಲ್‌ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಶ್ರೀಗಳ ಕೊಠಡಿ ಸೇರಿದಂತೆ ಸುತ್ತಲಿನ ಸಿ.ಸಿ.ಟಿ.ವಿ ದೃಶ್ಯಾವಳಿಗಳು ಪೊಲೀಸರ ಕೈಸೇರಿವೆ. ಆತ್ಮಹತ್ಯೆ ಹಿಂದಿನ ದಿನ ಶ್ರೀಗಳ ಜೊತೆ ಸಂಪರ್ಕದಲ್ಲಿದ್ದವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಶ್ರೀಗಳು ಎರಡು ಮೊಬೈಲ್‌ ಫೋನ್ ಬಳಸುತ್ತಿದ್ದರು. ಒಳ ಬಂದಿರುವ, ಹೊರಹೋದ ಕರೆಗಳನ್ನು ಆಧರಿಸಿ ವಿಚಾರಣೆ ನಡೆದಿದೆ. ಡೆತ್‌ನೋಟ್‌ನ ಕೈಬರಹ ಖಾತರಿ ಕುರಿತ ಎಫ್‌ಎಸ್‌ಎಲ್ ವರದಿ ಇನ್ನಷ್ಟೇ ಬರಬೇಕಿದೆ.

ADVERTISEMENT

ಶ್ರೀಗಳ ಮರಣೋತ್ತರ ಪರೀಕ್ಷೆ ವರದಿ ಬಂದಿದೆ. ಸ್ನಾಯು ಸೆಳೆತದಿಂದ ಉಸಿರುಗಟ್ಟಿ ಶ್ರೀಗಳು ಸಾವನ್ನಪ್ಪಿದ್ದು, ಮೈಮೇಲೆ ಗಾಯದ ಗುರುತು ಇಲ್ಲ ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.