ರಾಮನಗರ: ತಾಲೂಕಿನ ಚುಂಚಕ ಗ್ರಾಮದ ಗೌರಮ್ಮ (70) ಎಂಬುವರ ಮೇಲೆ ಕರಡಿಯೊಂದು ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ದಾಳಿ ನಡೆಸಿದೆ.
ಬೆಳಗ್ಗೆ ಗೌರಮ್ಮ ಮನೆಯಿಂದ ಹೊರ ಬಂದ ಸಂದರ್ಭ ಕರಡಿ ದಾಳಿ ನಡೆಸಿದೆ. ಸ್ಥಳದಲ್ಲಿ ಮತ್ತೊಂದು ಕರಡಿ ಸಹ ಇತ್ತು ಎನ್ನಲಾಗಿದೆ.
ದಾಳಿಯಿಂದ ಗೌರಮ್ಮ ಅವರ ಕೈ , ಕಾಲುಗಳಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಂದಿಗುಂದಿ ಅರಣ್ಯ ಪ್ರದೇಶಕ್ಕೆಹೊಂದಿಕೊಂಡಂತೆ ಚುಂಚಕ ಗ್ರಾಮ ಇದ್ದು, ಇಲ್ಲಿ ಕರಡಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.