ADVERTISEMENT

ಭೈರವನದುರ್ಗ: 66 ಅಡಿ ಉದ್ದದ ಕನ್ನಡ ಧ್ವಜ ಹಾರಾಟ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 3:44 IST
Last Updated 5 ನವೆಂಬರ್ 2021, 3:44 IST
ಮಾಗಡಿ ತಾಲ್ಲೂಕಿನ ಕುದೂರಿನ ಭೈರವನದುರ್ಗದ ಮೇಲೆ ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗದವರು 66 ಅಡಿ ಉದ್ದದ ಕನ್ನಡ ಧ್ವಜ ಹಾರಿಸುವ ಮೂಲಕ ಕನ್ನಡ ಪ್ರೇಮ ಮೆರೆದರು
ಮಾಗಡಿ ತಾಲ್ಲೂಕಿನ ಕುದೂರಿನ ಭೈರವನದುರ್ಗದ ಮೇಲೆ ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗದವರು 66 ಅಡಿ ಉದ್ದದ ಕನ್ನಡ ಧ್ವಜ ಹಾರಿಸುವ ಮೂಲಕ ಕನ್ನಡ ಪ್ರೇಮ ಮೆರೆದರು   

ಕುದೂರು (ಮಾಗಡಿ): ಗ್ರಾಮದ ಭೈರವನದುರ್ಗದ ತುತ್ತತುದಿಯಲ್ಲಿ 66 ಅಡಿ ಉದ್ದದ ಕನ್ನಡ ಬಾವುಟ ಹಾರಿಸಿ 14ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಡಾ.ರಾಜ್ ಕುಮಾರ್ ಅಭಿಮಾನಿ ಬಳಗದವರು ಕನ್ನಡ ಪ್ರೇಮ ಮೆರೆದರು.

ಕಾರ್ಯಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಉಮೇಶ್‌ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಎ.ಪಿ. ಕುಮಾರ್‌ ಭೈರವನದುರ್ಗದಲ್ಲಿ ಸಸಿ ಬೆಟ್ಟು ಚಾಲನೆನೀಡಿದರು.

ಇತಿಹಾಸವುಳ್ಳ ಕುದೂರು ಭೈರವನದುರ್ಗದ ತುದಿಯಲ್ಲಿ 66 ಅಡಿ ಉದ್ದದ ಕನ್ನಡ ಧ್ವಜ ಹಾರಾಡುವುದನ್ನು ನೋಡುವುದೇ ಆನಂದದಾಯಕವಾಗಿದೆ ಎಂದು ಉಮೇಶ್ತಿಳಿಸಿದರು.

ADVERTISEMENT

ಡಾ.ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಎಚ್. ನಾಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭ್ಯಾಗ್ಯಮ್ಮ, ಸದಸ್ಯರಾದ ಅನಂತನಾರಾಯಣ, ಸುರೇಶ್, ಸಾಧು, ಕಿರಣ್, ಗೋವಿಂದ, ಚಂದ್ರಶೇಖರ್, ಕೆಂಪಾಚಾರಿ, ಶರತ್‌, ಸಾಹಿತಿ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.