ADVERTISEMENT

ರಾಮನಗರ | ಬಿಜೆಪಿಯಿಂದ ನಾರಿಶಕ್ತಿ ವಂದನ್‌ ಓಟ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 5:35 IST
Last Updated 5 ಮಾರ್ಚ್ 2024, 5:35 IST
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಮನಗರದಲ್ಲಿ ಸೋಮವಾರ ದೇಶಕ್ಕಾಗಿ ಹಾಗೂ ಮೋದಿಗಾಗಿ ಓಟ ಧ್ಯೇಯದೊಂದಿಗೆ ನಾರಿಶಕ್ತಿ ವಂದನ ಮ್ಯಾರಾಥಾನ್ ಜರುಗಿತು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಮನಗರದಲ್ಲಿ ಸೋಮವಾರ ದೇಶಕ್ಕಾಗಿ ಹಾಗೂ ಮೋದಿಗಾಗಿ ಓಟ ಧ್ಯೇಯದೊಂದಿಗೆ ನಾರಿಶಕ್ತಿ ವಂದನ ಮ್ಯಾರಾಥಾನ್ ಜರುಗಿತು   

ರಾಮನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದಲ್ಲಿ ಸೋಮವಾರ ದೇಶಕ್ಕಾಗಿ ಹಾಗೂ ಮೋದಿಗಾಗಿ ಓಟ ಧ್ಯೇಯದೊಂದಿಗೆ ನಾರಿಶಕ್ತಿ ವಂದನ್‌ ಮ್ಯಾರಾಥಾನ್ ಜರುಗಿತು.

ನಗರದ ಚಾಮುಂಡೇಶ್ವರಿ ದೇವಾಲಯದ ಆವರಣದಿಂದ ಶುರುವಾದ ಮ್ಯಾರಾಥಾನ್ ಕಾಮಣ್ಣನ ಗುಡಿ ವೃತ್ತ, ಅಗ್ರಹಾರ, ಎಂ.ಜಿ. ರಸ್ತೆ, ಮುಖ್ಯರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ಈ ವೇಳೆ ಮಾತನಾಡಿದ ಪಕ್ಷದ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಪುಷ್ಪಲತಾ, ‘ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಿದ್ದರಿಂದಾಗಿ, ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾಳೆ. ಇದು ಹೀಗೆಯೇ ಮಂದುವರಿಯಬೇಕಾದರೆ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು’ ಎಂದರು.

ADVERTISEMENT

‘ಮೋದಿ ಅವರು ಸರ್ವ ಧರ್ಮ ಹಾಗೂ ಸಮುದಾಯಗಳ ಪ್ರಗತಿಯೊಂದಿಗೆ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ದೇಶ ಹಿಂದೆಂದೂ ಕಾಣದಂತಹ ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಕೈ ಬಲಪಡಿಸಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ಉಪಾಧ್ಯಕ್ಷರಾದ ಎಸ್.ಆರ್. ನಾಗರಾಜ್, ಮುರುಳೀಧರ್, ವಕ್ತಾರ ಪದ್ಮನಾಭ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ, ಸಾಮಾಜಿಕ ಜಾಲತಾಣ ಸಂಚಾಲಕಿ ವರಲಕ್ಷ್ಮಿ, ಮುಖಂಡರಾದ ಸಾನ್ವಿ, ಹೇಮಾವತಿ, ಯಲ್ಲಮ್ಮ ಶ್ವೇತಾ, ಹೇಮಾ, ಸಂಗೀತಾ, ರುದ್ರದೇವರು, ಶಿವಾನಂದ್, ಚಂದ್ರಶೇಖರ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.