ADVERTISEMENT

ಬ್ರಹ್ಮ ಚೈತನ್ಯ ಮಹಾರಾಜರ ಜಯಂತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 13:38 IST
Last Updated 7 ಫೆಬ್ರುವರಿ 2020, 13:38 IST
ಮಾಗಡಿ ಕುದೂರಿನ ರಾಮಮಂದಿರದಲ್ಲಿ ನಡೆದ ಬ್ರಹ್ಮ ಚೈತನ್ಯ ಮಹಾರಾಜರ ಜಯಂತಿ ಅಂಗವಾಗಿ ಅಲಂಕಾರ ಮಾಡಲಾಗಿತ್ತು.
ಮಾಗಡಿ ಕುದೂರಿನ ರಾಮಮಂದಿರದಲ್ಲಿ ನಡೆದ ಬ್ರಹ್ಮ ಚೈತನ್ಯ ಮಹಾರಾಜರ ಜಯಂತಿ ಅಂಗವಾಗಿ ಅಲಂಕಾರ ಮಾಡಲಾಗಿತ್ತು.   

ಕುದೂರು(ಮಾಗಡಿ): ಗ್ರಾಮದ ಗೋಂದಾವಳಿ ಬ್ರಹ್ಮ ಚೈತನ್ಯ ಸದ್ಗುರು ಮಹಾರಾಜರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬ್ರಹ್ಮ ಚೈತನ್ಯ ರಾಮಮದಿರ ಟ್ರಸ್ಟ್ ಇವರ ವತಿಯಿಂದ ಗುರುವಾರ ರಾಮಮದಿರ ದೇವಾಲಯದಲ್ಲಿ ಧಾರ್ಮಿಕ ಪೂಜಾದಿಗಳನ್ನು ನಡೆಸಲಾಯಿತು.

ರಾಮದೇವರಿಗೆ ಕಾಕಾಡಾರತಿ , ಬ್ರಹ್ಮ ಚೈತನ್ಯ ಮಹಾರಾಜರ ಪಾದುಕೆಗಳಿಗೆ ಏಕವಾರ ರುದ್ರಾಭಿಷೇಕ , ಗುರುಮಹಾರಾಜರಿಗೆ ತೊಟ್ಟಿಲು ಸೇವೆ . 12 ರಿಂದ ಅಷ್ಟಾವಧಾನ ಸೇವೆ , ಮಂತ್ರ ಪುಷ್ಪ ,ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು ಟ್ರಸ್ಟಿನ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT