ADVERTISEMENT

ರಾಮನಗರ: ಮರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಹಲವು ಪ್ರಯಾಣಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 11:54 IST
Last Updated 18 ಏಪ್ರಿಲ್ 2019, 11:54 IST
   

ರಾಮನಗರ: ತಾಲ್ಲೂಕಿನ ‌ಕೆಂಚನಕುಪ್ಪೆ ಗೇಟ್ ಬಳಿ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿಬಸ್ ಮರಕ್ಕೆ ಗುದ್ದಿದ್ದು, 23 ಪ್ರಯಾಣಿಕರು ಗಾಯಗೊಂಡರು.

ಮೈಸೂರಿನಿಂದ ಬೆಂಗಳೂರು‌ ಕಡೆಗೆ ಬಸ್‌ ಹೊರಟಿತ್ತು. ಬಸ್‌ನ ಸ್ಟೇರಿಂಗ್ ತುಂಡಾದ ಪರಿಣಾಮ ಈ ಅವಘಡ ಸಂಭವಿಸಿದೆ.

ಗಾಯಾಳುಗಳನ್ನು ಬಿಡದಿಯಲ್ಲಿನ ಆಸ್ಪತ್ರೆಗೆ ‌ದಾಖಲಿಸಲಾಗಿದೆ.

ADVERTISEMENT

***

ಕೆರೆಯಲ್ಲಿ ಮುಳುಗಿ‌ ಇಬ್ಬರು ಕುರಿಗಾಹಿಗಳ ಸಾವು
ರಾಮನಗರ:
ಬಿಡದಿಯ‌‌ ನೆಲ್ಲಿಗುಡ್ಡ ಕೆರೆಯಲ್ಲಿ ಗುರುವಾರ ಮಧ್ಯಾಹ್ನ ಕುರಿ‌ಗಳನ್ನು ತೊಳೆಯುವ ವೇಳೆ ನೀರಿನಲ್ಲಿ ಮುಳುಗಿ‌ ಇಬ್ಬರು‌ ಮೃತಪಟ್ಟರು.

ಕಾಕರಾಮನಹಳ್ಳಿ‌ ನಿವಾಸಿಗಳಾದ ರಾಜಣ್ಣ (55) ಹಾಗೂ ಕುಮಾರ್ (26) ಮೃತರು.ಈ ಇಬ್ಬರು ಕೆರೆಯ ದಡದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಬಿಸಿಲಿನ ಕಾರಣಕ್ಕೆ ಅವುಗಳನ್ನು ತೊಳೆಯಲು ನೀರಿಗೆ ಇಳಿದಿದ್ದರು. ಕೆರೆಯಲ್ಲಿ ಅಕ್ರಮ‌ ಮರಳುಗಾರಿಕೆಯಿಂದಾಗಿ ಗುಂಡಿಗಳು ಉಂಟಾಗಿದ್ದು, ‌ಈಜು ಬಾರದೇ ಈ ಇಬ್ಬರು ಸಾವನ್ನಪ್ಪಿದರು ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.