ಮಾಗಡಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಸ್ಥಾಪನೆಯಾಗಿ 75 ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ವಜ್ರ ಮಹೋತ್ಸವ ಏರ್ಪಡಿಸಲು ಸಂಘದ ಆಡಳಿತ ಮಂಡಳಿ ಸಜ್ಜಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ತಿಳಿಸಿದರು.
ಪಟ್ಟಣದ ಸಿದ್ದಾರೂಢಾಶ್ರಮ ಸಮುದಾಯ ಭವನದಲ್ಲಿ ಶನಿವಾರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಹೊಸಪೇಟೆ ವೃತ್ತದಲ್ಲಿ ಗೋದಮು ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಮುಂದಿನ ಜನವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ತಾಲ್ಲೂಕಿನ ರೈತರ ಅನುಕೂಲಕ್ಕೆ ರೈತ ಭವನ ನಿರ್ಮಿಸುವ ಆಶಯವನ್ನು ಆಡಳಿತ ಮಂಡಳಿ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಸಹಕಾರಿ ಸಂಘರ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಈ ಬಾರಿ ಸಂಘ ₹29.50 ಲಕ್ಷ ಲಾಭಾಂಶದಲ್ಲಿದೆ. ಮುಂದಿನ ಬಾರಿ ಲಾಭಾಂಶ ದುಪ್ಪಟ್ಟು ಮಾಡಲು ನಿರ್ದೇಶಕರು ಮತ್ತು ಅಧಿಕಾರಿಗಳಿಂದ ಸಲಹೆ ಪಡೆದು ಕಾರ್ಯನಿರ್ವಹಿಸಲಾಗುವುದು ತಿಳಿಸಿದರು.
ಸಹಕಾರಿ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ವಿ.ರಾಜು, ನಿರ್ದೇಶಕರಾದ ಸೋಮಶೇಖರ್, ನಂಜುಂಡಯ್ಯ, ಎಂ.ಆರ್. ಮಂಜುನಾಥ್, ಗಂಗಣ್ಣ, ಕಲ್ಲೂರ್ ರಂಗನಾಥ್, ಶಿಲ್ಪ ವಿಜಯ್ ಕುಮಾರ್, ನಂಜುಂಡಯ್ಯ, ರಮೇಶ್, ರವೀಶ್, ಮಹದೇವ್, ಗೀತಾ ರಂಗನಾಥ್, ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಎಂ.ಕೆ.ಧನಂಜಯ, ಮಂಚನಬೆಲೆ ಲೋಕೇಶ್, ಚಕ್ರಬಾವಿ ರವೀಂದ್ರ, ಡಿ.ಸಿ.ಶಿವಣ್ಣ, ಯೋಗನರಸಿಅಮಹಯ್ಯ, ಮರೂರು ವೆಂಕಟೇಶ್, ತಿಪ್ಪಸಂದ್ರ ವೆಂಕಟೇಶ್, ಧನಂಜಯ ನಾಯಕ್ ನಾರಾಯಣಪ್ಪ, ಬೆಳಗುಂಬ ವಿಜಯ್ ಕುಮಾರ್, ಸಿಗೇಕುಪ್ಪೆ ಲೋಕೇಶ್, ಸಂಘದ ಕಾರ್ಯನಿರ್ವಾಹಕ ನಾರಾಯಣ್, ಸಹಾಯಕ ರಘು, ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.